BIG NEWS: ಬಿರುಗಾಳಿ ಮಳೆ: ಸಿಡಿಲು ಬಡಿದು ಯುವಕ ಸಾವು

ವಿಜಯನಗರ: ಬಿರುಗಾಳಿ, ಮಳೆ ಆರಭಟದ ನಡುವೆ ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬಂಡೆಬಸಾಪುರದಲ್ಲಿ ನಡೆದಿದೆ.

ಪಾಂಡುನಾಯ್ಕ್ (18) ಮೃತ ಯುವಕ. ನಿನ್ನೆ ಸಂಜೆ ಭಾರಿ ಮಳೆ ವೇಳೆ ಯುವಕ ಮನೆ ಬಳಿ ನಿಂತಿದ್ದ. ಈ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸೊಡಿಲ ಹೊಡೆತಕ್ಕೆ ಮನೆ ಗೋಡೆ ಹಾನಿಯಾಗಿದೆ. ಕೂಡ್ಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read