Odisha Train Accident: ಹಳಿ ತಪ್ಪುತ್ತಿದೆಯಾ ಇಲಾಖಾ ತನಿಖೆ ? ಕುತೂಹಲ ಕೆರಳಿಸಿದೆ ಅಧಿಕಾರಿ ಟಿಪ್ಪಣಿ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ಮೂರು ರೈಲು ಅಪಘಾತದ ಕಾರಣವನ್ನು ಕಂಡುಹಿಡಿಯಲು ಇನ್ನೂ ತನಿಖೆ ನಡೆಯುತ್ತಿದ್ದು, ಅಪಘಾತದ ಕಾರಣದ ಬಗ್ಗೆ ಇಲಾಖೆಯೊಳಗೆ ನಡೆಯುತ್ತಿರುವ ತನಿಖೆಯಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಐವರು ರೈಲ್ವೆ ಅಧಿಕಾರಿಗಳ ತನಿಖಾ ತಂಡದಲ್ಲಿ ಒಬ್ಬರಾದ ಹಿರಿಯ ರೈಲ್ವೇ ಇಂಜಿನಿಯರ್ ಎಕೆ ಮಹಂತ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ಡಾಟಾಲಾಜರ್’ ವರದಿಯನ್ನು ಉಲ್ಲೇಖಿಸಿದ ಅಧಿಕಾರಿ, ಸಿಗ್ನಲ್ ವೈಫಲ್ಯದಿಂದ ದುರಂತ ಸಂಭವಿಸಿಲ್ಲ ಎಂದಿದ್ದಾರೆ. ದುರದೃಷ್ಟಕರ ಕೋರಮಂಡಲ್ ಎಕ್ಸ್ ಪ್ರೆಸ್ ಮುಖ್ಯ ಮಾರ್ಗವನ್ನು ತೆಗೆದುಕೊಳ್ಳಲು ಸಿಗ್ನಲ್ ಹಸಿರು ಬಣ್ಣದ್ದಾಗಿತ್ತು, ಲೂಪ್ ಲೈನ್ ನಲ್ಲಿ ಸಾಗಲು ಅಲ್ಲ ಎಂದು ಹೇಳಿದರು. ಇಲಾಖೆಯೊಳಗಿನ ತಪಾಸಣಾ ವರದಿಯು ಮೂರು ರೈಲುಗಳ ಅಪಘಾತಕ್ಕೆ “ಸಿಗ್ನಲ್ ವೈಫಲ್ಯ” ಕಾರಣವಾಗಿರಬಹುದು ಎಂದು ಹೇಳಿದಾಗಲೂ ಅವರು ಅದನ್ನು ನಿರಾಕರಿಸಿದ್ದರು.

ಕೋರಮಂಡಲ್ ಎಕ್ಸ್ ಪ್ರೆಸ್‌ನ ಚಾಲಕನಿಗೆ ಲೂಪ್ ಲೈನ್ ತೆಗೆದುಕೊಳ್ಳಲು ಸಿಗ್ನಲ್ ನೀಡಿದ ನಂತರ ನಿಂತಿದ್ದ ಗೂಡ್ಸ್ ರೈಲಿಗೆ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂಬ ಸಮಿತಿಯ ಇತರ ನಾಲ್ಕು ಸದಸ್ಯರ ನಿಲುವಿಗೆ ತಮ್ಮ ಭಿನ್ನಾಭಿಪ್ರಾಯ ಟಿಪ್ಪಣಿಯಲ್ಲಿ, ಸಿಗ್ನಲ್‌ಗಳು ಮತ್ತು ಸಂವಹನಗಳ (ಬಾಲಾಸೋರ್) ಹಿರಿಯ ಎಂಜಿನಿಯರ್ ಎಕೆ ಮಹಂತ ನಿಲುವು ಭಿನ್ನವಾಗಿದೆ.

“ಪಾಯಿಂಟ್ ಸಂಖ್ಯೆ 17A ಅನ್ನು ಬಹನಾಗಾ ಬಜಾರ್ ನಿಲ್ದಾಣದ ಅಪ್ ಲೂಪ್ ಲೈನ್ (ಹಿಮ್ಮುಖ ಸ್ಥಿತಿಯಲ್ಲಿ) ಹೊಂದಿಸಿರುವುದು ಕಂಡುಬಂದಿದೆ” ಎಂದು ಸಮಿತಿಯು ತನ್ನ ಜಂಟಿ ತಪಾಸಣಾ ವರದಿಯಲ್ಲಿ ತಿಳಿಸಿದೆ. ‘ರಿವರ್ಸ್’ ಸ್ಥಿತಿಯಲ್ಲಿ ಸೆಟ್ಟಿಂಗ್ ಪಾಯಿಂಟ್ ಎಂದರೆ ಸಮೀಪಿಸುತ್ತಿರುವ ರೈಲಿಗೆ ಲೂಪ್ ಲೈನ್‌ಗೆ ಪ್ರವೇಶಿಸಲು ಅನುಮತಿಸಲಾಗಿದೆ ಆದರೆ ಸಾಮಾನ್ಯ ಸ್ಥಿತಿಯಲ್ಲಿ ಸೆಟ್ಟಿಂಗ್ ಪಾಯಿಂಟ್ ಎಂದರೆ ರೈಲು ಮುಖ್ಯ ಮಾರ್ಗವನ್ನು ತೆಗೆದುಕೊಳ್ಳುವಂತೆ ಸಂಕೇತಿಸುತ್ತದೆ.

ಈ ಸಂದರ್ಭದಲ್ಲಿ ಪಾಯಿಂಟ್ ಸಂಖ್ಯೆ 17A ಕೋರಮಂಡಲ್ ಎಕ್ಸ್ ಪ್ರೆಸ್ ಲೂಪ್ ಲೈನ್ ಅನ್ನು ಪ್ರವೇಶಿಸಿದೆ. ಅಪ್ ಲೂಪ್ ಲೈನ್‌ಗಾಗಿ ಪಾಯಿಂಟ್ ಸಂಖ್ಯೆ 17A ಅನ್ನು ಹೊಂದಿಸಲಾಗಿದೆ ಎಂದು ಉಲ್ಲೇಖಿಸಿರುವ ವರದಿಯ ಭಾಗವನ್ನ ನಾನು ಒಪ್ಪುವುದಿಲ್ಲ. ಡಾಟಾಲಾಗರ್ ವರದಿಯ ಅವಲೋಕನದ ಆಧಾರದ ಮೇಲೆ, ಪಾಯಿಂಟ್ 17 ಅನ್ನು ಸಾಮಾನ್ಯ ಭಾಗಕ್ಕೆ ಹೊಂದಿಸಲಾಗಿದೆ. ಹಳಿತಪ್ಪಿದ ನಂತರ ಇದು ರಿವರ್ಸ್ ಆಗಿರಬಹುದು” ಎಂದು ಮಹಂತ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು “ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್” ಸಮಸ್ಯೆಯಿಂದ ದುರಂತ ಸಂಭವಿಸಿದೆ ಎಂದು ಹೇಳಿದರೆ, ಸಿಗ್ನಲಿಂಗ್‌ನಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತವೆ ಎಂದು ರೈಲ್ವೆ ಮಂಡಳಿ ಹೇಳಿತ್ತು.

ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಟ್ರಿಪಲ್ ರೈಲು ದುರಂತದಲ್ಲಿ ಕನಿಷ್ಠ 278 ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read