ಭುವನೇಶ್ವರ: ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ತಲೆ ಇಲ್ಲದ ಮಹಿಳೆಯ ಶವ ಪತ್ತೆಯಾದ ನಂತರ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿದೆ.
ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರದೇಶದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ವೈಜ್ಞಾನಿಕ ತಂಡ, ಸ್ನಿಫರ್-ಡಾಗ್ ಸ್ಕ್ವಾಡ್ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ(ODRAF) ಸ್ಥಳಕ್ಕೆ ಆಗಮಿಸಿದ್ದು, ಕಾಣೆಯಾದ ತಲೆಯನ್ನು ಪತ್ತೆಹಚ್ಚಲು ಮತ್ತು ಇತರ ಸಂಭಾವ್ಯ ಪುರಾವೆಗಳನ್ನು ಸಂಗ್ರಹಿಸಲು ವ್ಯಾಪಕ ಶೋಧ ನಡೆಸುತ್ತಿದೆ.
ಪರಿಸ್ಥಿತಿ ಈಗ ಶಾಂತವಾಗಿದೆ: ಜಿಲ್ಲಾಧಿಕಾರಿ
ಮಲ್ಕನ್ ಗಿರಿ ಜಿಲ್ಲಾಧಿಕಾರಿ, ಪರಿಸ್ಥಿತಿ ಈಗ ಶಾಂತಿಯುತವಾಗಿದೆ. ಎರಡೂ ಸಮುದಾಯಗಳ ನಡುವೆ ಒಪ್ಪಂದಕ್ಕೆ ಬರಲಾಗಿದೆ. ಇಂದಿನ ಶಾಂತಿ ಸಮಿತಿ ಸಭೆಗೆ ಅವರು ತಮ್ಮ ಪ್ರತಿನಿಧಿಗಳನ್ನು ಹೆಸರಿಸಿದ್ದಾರೆ. ಸಹಜ ಸ್ಥಿತಿ ಮರಳುತ್ತದೆ ಎಂದು ನಾವು ಭಾವಿಸುತ್ತೇವೆ. ಪ್ರಾಥಮಿಕ ಅಂದಾಜಿನ ಪ್ರಕಾರ, 163 ಮನೆಗಳಿಗೆ ಹಾನಿಯಾಗಿದೆ. ಬಲಿಪಶುವಿನ ಮಗನಿಗೆ 30,000 ರೂ.ಗಳ ಪರಿಹಾರ ನೀಡಲಾಗಿದೆ. ಮುಖ್ಯಮಂತ್ರಿ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
ಇದರ ಜೊತೆಗೆ, ನದಿಯಿಂದ ತಲೆ ಇಲ್ಲದ ಶವ ಪತ್ತೆಯಾಗಿರುವ ಬುಡಕಟ್ಟು ಮಹಿಳೆಯ ಹತ್ಯೆಯ ಆರೋಪದ ಮೇಲೆ ನಡೆದ ಗುಂಪು ಘರ್ಷಣೆಯ ನಂತರ ಎರಡು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಖೇಲ್ಗುಡ ಗ್ರಾಮದ ಬುಡಕಟ್ಟು ಜನಾಂಗದವರು ಕೊರ್ಕುಂಡ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ MV-26 ಗ್ರಾಮದ ಮೇಲೆ ದಾಳಿ ಮಾಡಿದಾಗ ಘರ್ಷಣೆ ಸಂಭವಿಸಿದೆ. ಕನಿಷ್ಠ ಒಂದು ಡಜನ್ ಮನೆಗಳು ಹಾನಿಗೊಳಗಾಗಿವೆ, ಕೆಲವು ವಾಹನಗಳು ನಾಶವಾಗಿವೆ ಮತ್ತು ಸುಮಾರು ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಕನ್ ಗಿರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕಿಶೋರ್ ದಾಸ್ ಮಾತನಾಡಿ, ಒಡಿಶಾ ಪೊಲೀಸ್ ಮತ್ತು ಬಿಎಸ್ಎಫ್ನ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆಯೊಂದಿಗೆ ಒಡಿಶಾ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.
ಡಿಐಜಿ(ನೈಋತ್ಯ) ಕನ್ವರ್ ವಿಶಾಲ್ ಸಿಂಗ್, ಮಲ್ಕನ್ ಗಿರಿ ಕಲೆಕ್ಟರ್ ಸೋಮೇಶ್ ಕುಮಾರ್ ಉಪಾಧ್ಯಾಯ ಮತ್ತು ಎಸ್ಪಿ ವಿನೋದ್ ಪಾಟೀಲ್ ಹೆಚ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಎರಡೂ ಗುಂಪುಗಳನ್ನು ಒಳಗೊಂಡ ಶಾಂತಿ ಸಮಿತಿ ಸಭೆ ನಡೆಸಿದ್ದಾರೆ.
ಹಿಂಸಾಚಾರ ಭುಗಿಲೆದ್ದ ಕಾರಣ
ರಾಖೇಲ್ಗುಡ ಗ್ರಾಮದ ವಿಧವೆ ಲೇಕ್ ಪಡಿಯಾಮಿ ಎಂದು ಗುರುತಿಸಲಾದ 51 ವರ್ಷದ ಮಹಿಳೆಯ ತಲೆ ಇಲ್ಲದ ಶವ ಪತ್ತೆಯಾದ ನಂತರ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಸ್ಥಳೀಯ ನದಿ ದಂಡೆಯಿಂದ ಆಕೆಯ ಶವ ಪತ್ತೆಯಾಗಿದ್ದು, ಸ್ಥಳೀಯ ಬುಡಕಟ್ಟು ಸಮುದಾಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬುಡಕಟ್ಟು ಸಂಘಟನೆಗಳು ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ ಕಾಣೆಯಾದ ತಲೆಯನ್ನು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿವೆ. ರಾಖೇಲ್ ಗುಡ ಗ್ರಾಮದ ನೂರಾರು ಬುಡಕಟ್ಟು ಪುರುಷರು ಮತ್ತು ಮಹಿಳೆಯರು ಶಸ್ತ್ರಾಸ್ತ್ರಗಳನ್ನು ಹಿಡಿದು MV-26 ಗ್ರಾಮದಲ್ಲಿ ಜಮಾಯಿಸಿ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಗುಂಪು MV-26 ಗ್ರಾಮದಲ್ಲಿ ಬಲವಂತವಾಗಿ ಮನೆಗಳಿಗೆ ನುಗ್ಗಿ, ಆಸ್ತಿಪಾಸ್ತಿಗಳನ್ನು ನಾಶಪಡಿಸಿ, ಅಂಗಡಿಗಳನ್ನು ಲೂಟಿ ಮಾಡಿ, ಕೆಲವು ಮನೆಗಳಿಗೆ ಬೆಂಕಿ ಹಚ್ಚಿದೆ. MV-26 ಗ್ರಾಮದಿಂದ ಅನೇಕ ಜನರು ಪರಾರಿಯಾಗಿದ್ದರೆ, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#WATCH | Two villages clash in Malakanagiri district in Odisha after a headless body of a woman was found. Internet services are temporarily suspended. Forces deployed in the area.
— ANI (@ANI) December 9, 2025
A scientific team, a sniffer-dog squad, and the Odisha Disaster Rapid Action Force (ODRAF) have… pic.twitter.com/VzexkRaJkF
