ಮೈಸೂರು: ಈಗ ನಾವಿರುವ ಮನೆ ನನ್ನದಲ್ಲ, ಮರಿಸ್ವಾಮಿಯವರದ್ದು. ಮರಿಸ್ವಾಮಿಯೇ ನನಗೆ ನನ್ನ ಮಗನಿಗೆ ಅನ್ನದಾತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನಗೆ, ನನ್ನ ಸ್ನೇಹಿತರಿಗೆ ನನ್ನ ಮಗನಿಗೆ ಊಟ ಹಾಕುವುದು ಮರಿಸ್ವಾಮಿ. ಈಗ ನಾವಿರುವುದು ಮರಿಸ್ವಾಮಿಯವರ ಮನೆ. ಆತನೇ ನಮಗೆ ಅನ್ನದಾತ ಎಂದರು.
ನಮ್ಮ ಹೊಸ ಮನೆ ನಿರ್ಮಾಣವಾಗುತ್ತಿದೆ. ಮನೆ ಆದ ಬಳಿಕ ಗೃಹ ಪ್ರವೇಶದ ಬಳಿಕ ಹೊಸ ಮನೆಗೆ ಶಿಫ್ಟ್ ಆಗುತ್ತೇವೆ. ಈ ಮನೆ ಖಾಲೆ ಇಟ್ಟರೆ ಜನರ ಭೇಟಿಗೆ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು.