ಕುಂದಾಪುರ : ರಾಜ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಸಾಲಭಾದೆಯಿಂದ ಬೇಸತ್ತು ಒಂದೇ ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ತೆಕ್ಕಟ್ಟೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಅಪ್ಪ, ಮಗ ಮೃತಪಟ್ಟಿದ್ದರೆ, ತಾಯಿಯ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಕಂಚುಗಾರುಬೆಟ್ಟು ನಿವಾಸಿ ಮಾಧವ ದೇವಾಡಿಗ (56) ಗಿರೀಶ್ (22) ಎಂದು ಗುರುತಿಸಲಾಗಿದೆ. ಪತ್ನಿ ತಾರಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಧವ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಿಕ್ಕಾಪಟ್ಟೆ ಸಾಲ ಕೂಡ ಮಾಡಿಕೊಂಡಿದ್ದರು. ಸಾಲ ಮರುಪಾವತಿ ಮಾಡದ ಹಿನ್ನೆಲೆ ಬ್ಯಾಂಕುಗಳು ನೋಟಿಸ್ ಕೊಟ್ಟಿದ್ದವು. ಇದರಿಂದ ಮನನೊಂದು ಮಾಧವ ಹಾಗೂ ಗಿರೀಶ್ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ತಿಳಿದ ತಾರಾ ಕೂಡ ಬಾವಿಗೆ ಹಾರಿದ್ದು, ಕೂಡಲೇ ಸ್ಥಳೀಯರು ಕಿರುಚಾಟ ಕೇಳಿಸಿ ಬಾವಿಗೆ ಇಳಿದು ತಾರಾರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಧಾವಿಸಿ ಮೃತದೇಹವನ್ನು ಮೇಲಕ್ಕೆ ಎತ್ತಿದೆ.
You Might Also Like
TAGGED:ಸಾಲಭಾದೆ