ಸಂಘ –ಸಂಸ್ಥೆಗಳ ಅನುದಾನ 5 ಲಕ್ಷ ರೂ.ಗೆ ಹೆಚ್ಚಳ: ನಿರ್ಬಂಧ ಸಡಿಲಿಸಿ ಪರಿಷ್ಕೃತ ಆದೇಶ

ಬೆಂಗಳೂರು: ಸಂಘ ಸಂಸ್ಥೆಗಳ ಅನುದಾನ ಮಿತಿ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸಂಘಗಳಿಗೆ ನೀಡಲಾಗುವ ಧನಸಹಾಯ ಕುರಿತಾದ ನಿಬಂಧನೆಗಳನ್ನು ಸಡಿಲಿಕೆ ಮಾಡಲಾಗಿದೆ.

ಸಂಸ್ಥೆಯೊಂದಕ್ಕೆ ನೀಡುವ ಗರಿಷ್ಠ ಅನುದಾನದ ಮಿತಿಯನ್ನು 2 ಲಕ್ಷ ರೂ. ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ ನೋಂದಾಯಿತ ಸಂಘ-ಸಂಸ್ಥೆ ಮತ್ತು ಟ್ರಸ್ಟ್ ಗಳಿಗೆ ಧನಸಹಾಯದ ಪರಿಷ್ಕೃತ ಮಾರ್ಗಸೂಚಿಗೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.

ಮೂರು ವರ್ಷದಿಂದ ನಿರಂತರವಾಗಿ ಅನುದಾನ ಪಡೆಯುವ ಸಂಘ-ಸಂಸ್ಥೆಗಳು ನಾಲ್ಕನೇ ವರ್ಷ ಧನಸಹಾಯ ಪಡೆದುಕೊಳ್ಳುವಂತಿಲ್ಲ ಎನ್ನುವ ನಿಯಮ ಕೈ ಬಿಡಲಾಗಿದ್ದು, ಈ ಮೊದಲಿನಂತೆ ಸಂಘ ಸಂಸ್ಥೆಗಳು ನಿರಂತರವಾಗಿ ಅನುದಾನ ಪಡೆಯಬಹುದಾಗಿದೆ.

ನಿರ್ಬಂಧ ಸಡಿಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ಆರ್ಥಿಕ ನೆರವು ಪಡೆದು ಆಯೋಜಿಸುವ ಕಾರ್ಯಕ್ರಮಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಸಹಾಯಕ ನಿರ್ದೇಶಕರ ಗಮನಕ್ಕೆ ತಂದು ಕಡ್ಡಾಯವಾಗಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎನ್ನುವ ನಿಯಮ ಕೈಬಿಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read