ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಗುಜರಾತ್ ಮೂಲದ ವಜ್ರ ವ್ಯಾಪಾರಿ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ದುಬಾರಿ ಆಭರಣಗಳ ಸಂಗ್ರಹವನ್ನು ದಾನ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್(ವಿಹೆಚ್ಪಿ) ದೇಣಿಗೆಯಲ್ಲಿ 11 ವಜ್ರ-ಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳು ಮತ್ತು ಇತರ ಅಲಂಕೃತ ವಸ್ತುಗಳು ಸೇರಿವೆ ಎಂದು ಹೇಳಿದೆ.
ವ್ಯಾಪಾರಿ ನೀಡಿದ ದೇಣಿಗೆಯಲ್ಲಿ ಹಾರಗಳು, ಕಿವಿಯೋಲೆಗಳು, ಅಲಂಕಾರಿಕ ಹಣೆಯ ತಿಲಕಗಳು, ಏಳು ಬಿಲ್ಲುಗಳು(ನಾಲ್ಕು ದೊಡ್ಡ ಮತ್ತು ಮೂರು ಸಣ್ಣ), ನಾಲ್ಕು ಬತ್ತಳಿಕೆಗಳು, ಮೂರು ಗದೆಗಳು ಸೇರಿವೆ ಎಂದು ವಿಹೆಚ್ಪಿ ರಾಷ್ಟ್ರೀಯ ಖಜಾಂಚಿ ದಿನೇಶ್ ನೆವಾಡಿಯಾ ಹೇಳಿದ್ದಾರೆ.
ವಜ್ರ ವ್ಯಾಪಾರಿ ಮುಖೇಶ್ ಪಟೇಲ್ 11 ವಜ್ರಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳನ್ನು ದಾನ ಮಾಡಿದರು. ಈ ವಸ್ತುಗಳನ್ನು ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಯಿತು ಎಂದು ನ್ಯೂವಾಡಿಯಾ ತಿಳಿಸಿದ್ದಾರೆ.
ಪ್ರಸಿದ್ಧ ಉದ್ಯಮಿಯಾಗಿರುವ ಪಟೇಲ್, ಸೂರತ್ನಲ್ಲಿ ಗ್ರೀನ್ ಲ್ಯಾಬ್ ಎಂಬ ಆಭರಣ ಸಂಸ್ಥೆಯ ಮಾಲೀಕರಾಗಿದ್ದಾರೆ. ಅವರು ತಮ್ಮ ಧಾರ್ಮಿಕ ದೇಣಿಗೆ ದಾನಗಳಿಗೆ ಹೆಸರುವಾಸಿಯಾಗಿದ್ದಾರೆ.