ದಾಳಿ ಮಾಡಿದ ಚಿರತೆಯನ್ನೇ ಕೊಂಬಿನಿಂದ ತಿವಿದು ಮಾಲೀಕನ ರಕ್ಷಿಸಿದ ಹಸು

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡಕಿಕೆರೆ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಸು ಕೊಂಬಿನಿಂದ ತಿವಿದು ಓಡಿಸಿ ಮಾಲೀಕನನ್ನು ರಕ್ಷಿಸಿದೆ.

ಬುಧವಾರ ಬೆಳಗ್ಗೆ ಕೊಡಕಿಕೆರೆ ಗ್ರಾಮದ ಕರಿಹಾಲಪ್ಪ(58) ಚಿರತೆ ದಾಳಿಗೆ ಸಿಲುಕಿ ಜೀವ ಉಳಿಸಿಕೊಂಡಿದ್ದಾರೆ. ತೋಟದಲ್ಲಿ ಹಸು ಮೇಯಿಸಲು ಬಂದಿದ್ದ ವೇಳೆ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಕರಿಹಾಲಪ್ಪನವರ ಮೇಲೆ ಎಗರಿದ ಚಿರತೆ ಪರಚಿ ಗಾಯಗೊಳಿಸಿದೆ. ಸಮೀಪದಲ್ಲಿಯೇ ಮೇಯುತಿದ್ದ ಹಸು ಕೂಡಲೇ ಕೊಂಬಿನಿಂದ ಚಿರತೆಗೆ ತಿವಿದು ಕಾಲಿನಿಂದ ತುಳಿದಿದೆ. ಇದರಿಂದ ಬೆದರಿದ ಚಿರತೆ ಅಲ್ಲಿಂದ ಪರಾರಿಯಾಗಿದ್ದು, ಬೆನ್ನಿಗೆ ಗಾಯಗಳಾಗಿರುವ ಕರಿಹಾಲಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read