ಮನೆಯಿಂದ ತೆವಳುತ್ತ ಹೊರಗೆ ಬಂದ ಮಗು ಚರಂಡಿಗೆ ಬಿದ್ದು ಸಾವು

ಬೆಂಗಳೂರು: ಮನೆಯಿಂದ ತೆವಳುತ್ತ ಹೊರಗೆ ಬಂದ ಮಗು ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸೋಂಪುರ ಹೋಬಳಿಯ ನಿಡವಂದ ಕಾಲೋನಿಯಲ್ಲಿ ನಡೆದಿದೆ.

10 ತಿಂಗಳ ಮಗು ರಾಜಕುಮಾರ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಶನಿವಾರ ಬೆಳಗ್ಗೆ 6:30ರ ವೇಳೆ ಮನೆಯೊಳಗಿದ್ದ ಮಗು ತೆವಳಿಕೊಂಡು ಅಂಗಳದಲ್ಲಿ ನಿಲ್ಲಿಸಿದ್ದ ಕ್ಯಾಂಟರ್ ಕೆಳಗೆ ಹೋಗಿದೆ. ಕ್ಯಾಂಟರ್ ಪಕ್ಕದಲ್ಲಿಯೇ ಇದ್ದ ಸುಮಾರು ಮೂರ್ನಾಲ್ಕು ಅಡಿ ಆಳದ ಚರಂಡಿಗೆ ಬಿದ್ದಿದೆ. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಮಗು ಕಾಣಿಸದಿದ್ದಾಗ ಪೋಷಕರು ಹುಡುಕಾಡಿದ ವೇಳೆ ಚರಂಡಿಯಲ್ಲಿ ಮಗು ಪತ್ತೆಯಾಗಿದೆ. ಮಗುವಿನ ತಂದೆ ಉಮೇಶ್ ಸಿಂಗ್ ಮತ್ತು ತಾಯಿ ಅನಿತಾದೇವಿ ಬಿಹಾರದ ಬಕ್ಸರ್ ಜಿಲ್ಲೆಯ ನೋನ್ಪುರದವರಾಗಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read