BREAKING: ಇನೋವಾ ಡಿಕ್ಕಿಯಾಗಿ ವಕೀಲ ಸಾವು: ಎರಡೂವರೆ ಕಿ.ಮೀ ಸವಾರನ ಎಳೆದೊಯ್ದ ಚಾಲಕ: ವ್ಯವಸ್ಥಿತ ಕೊಲೆ ಶಂಕೆ

ವಿಜಯಪುರ: ಇನೋವಾ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ವಕೀಲ ಸಾವು ಕಂಡ ಘಟನೆ ವಿಜಯಪುರದ ಬಸವನನಗರದ ಬಳಿ ನಡೆದಿದೆ.

ಎರಡೂವರೆ ಕಿಲೋಮೀಟರ್ ಸವಾರನನ್ನು ವಾಹನ ಚಾಲಕ ಬಸವನಗರದಿಂದ ಜಿಲ್ಲಾ ಪಂಚಾಯಿತಿ ಪ್ರವೇಶ ದ್ವಾರದವರೆಗೆ ಕಾರ್ ಚಾಲಕ ಎಳೆದುಕೊಂಡು ಹೋಗಿದ್ದಾನೆ. ದ್ವಿಚಕ್ರ ವಾಹನದಲ್ಲಿದ್ದ ವಕೀಲ ರವಿ ಮೇಲಿನಮನಿ(37) ಸಾವನ್ನಪ್ಪಿದ್ದಾರೆ.

ಅವರು ಭೀಮಾ ತೀರದ ಹಂತಕ ಕುಖ್ಯಾತಿಯ ಭಾಗಪ್ಪನ ಸಂಬಂಧಿಕನಾಗಿದ್ದಾರೆ. ಘಟನೆಯ ಬಳಿಕ ಇನೋವಾ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇದು ಅಪಘಾತವಲ್ಲ, ವ್ಯವಸ್ಥಿತವಾಗಿ ರವಿ ಮೇಲಿನಮನಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್‌ಪಿ ಋಷಿಕೇಶ ಸೋನೆವಣೆ, ಎಸ್ಪಿ ಶಂಕರ ಮಾರಿಹಾಳ ಡಿವೈಎಸ್ಪಿ ಬಸವರಾಜ ಯಲಿಗಾರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ಬಳಿಕ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read