ನಾಲ್ಕೈದು ಜನ ಬಂದು ಹೇಳಿದಾಕ್ಷಣ ಟಿಕೆಟ್ ಕೊಡಲು ಆಗೋಲ್ಲ: ಬಿ.ಎಲ್. ಸಂತೋಷ್ ಖಡಕ್ ಸಂದೇಶ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಟಿಕೆಟ್ ಗಾಗಿ ಎಲ್ಲ ಪಕ್ಷಗಳಲ್ಲಿಯೂ ಪೈಪೋಟಿ ಶುರುವಾಗಿದೆ. ಅದಕ್ಕಾಗಿ ಒತ್ತಡ ತಂತ್ರದ ಜೊತೆಗೆ ಪಕ್ಷದ ಉನ್ನತ ನಾಯಕರಿಂದ ಶಿಫಾರಸ್ಸು ಮಾಡಿಸಲು ಸಹ ಆಕಾಂಕ್ಷಿಗಳು ಮುಂದಾಗುತ್ತಾರೆ. ಇದೀಗ ತಮ್ಮ ಪಕ್ಷದ ಆಕಾಂಕ್ಷಿಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಖಡಕ್ ಸಂದೇಶ ರವಾನಿಸಿದ್ದಾರೆ.

ಬಾಗಲಕೋಟೆಯ ನವ ನಗರದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾರೋ ನಾಲ್ಕೈದು ಜನ ಬಂದು ಹೇಳಿದ ತಕ್ಷಣ ಟಿಕೆಟ್ ನೀಡಲು ಸಾಧ್ಯವಾಗುವುದಿಲ್ಲ. ಕ್ಷೇತ್ರದ ಸಾವಿರಾರು ಮತದಾರರ ಅಭಿಪ್ರಾಯ ಕೂಡ ಮುಖ್ಯವಾಗುತ್ತದೆ. ಜೊತೆಗೆ ವ್ಯಕ್ತಿಯ ಸಾಮರ್ಥ್ಯ ಹಾಗೂ ಯೋಗ್ಯತೆ ನೋಡಿ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿಯ ಅನಿವಾರ್ಯತೆ ಇದೆ ಎಂಬ ಕಲ್ಪನೆಯೊಂದಿಗೆ ಚುನಾವಣೆಯನ್ನು ಎದುರಿಸಲು ಸಿದ್ದರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ವಿಪಕ್ಷಗಳಲ್ಲಿ ಕಾರ್ಯಕರ್ತರೇ ಇರದಂತೆ ಬಿಜೆಪಿ ಸೇರ್ಪಡೆಗೊಳ್ಳಲು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read