BREAKING: ಹಣಕಾಸಿನ ವಿಚಾರದ ಗಲಾಟೆ ವೇಳೆ ಯುವಕನಿಗೆ ಚಾಕು ಇರಿತ

ಕೋಲಾರ: ಹಣಕಾಸಿನ ವಿಚಾರವಾಗಿ ಗಲಾಟೆಯ ವೇಳೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಕೋಲಾರದ ಶಾರದಾ ಟಾಕೀಸ್ ಬಳಿ ನಡೆದಿದೆ.

ಕೋಲಾರದ ಭವಾನಿ ನಗರದ ಸುನಿಲ್ ಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ. ಸುಮನ್ ಗೆ ಚಾಕು ಇರಿಯಲು ಯತ್ನಿಸಿದ ವೇಳೆ ಸುನಿಲ್ ಅಡ್ಡ ಬಂದಿದ್ದಾನೆ. ಈ ವೇಳೆ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿಯಲು ಬಂದಿದ್ದ ರಾಹುಲ್ ಮತ್ತು ಕೃಷ್ಣೋಜಿರಾವ್ ಅವರಿಗೂ ಗಾಯಗಳಾಗಿವೆ. ಗಲಾಟೆಯ ನಂತರ ಸ್ಥಳದಿಂದ ರಾಹುಲ್ ಮತ್ತು ಸುಮನ್ ಪರಾರಿಯಾಗಿದ್ದಾರೆ. ಗಾಯಗೊಂಡ ಸುನಿಲ್, ಕೃಷ್ಣೋಜಿರಾವ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read