ರಾಹುಲ್ ರ್ಯಾಲಿಯಲ್ಲಿ ವೀರ್ ಸಾವರ್ಕರ್ ಅವರ ‘ಜಯಸ್ತುತೆ’ ಹಾಡು

ಮುಂಬೈನಲ್ಲಿ ನಡೆದ ಮಹಾವಿಕಾಸ್ ಅಘಾಡಿ (MVA) ಚುನಾವಣಾ ರ್ಯಾಲಿಯಲ್ಲಿ ಮಹತ್ವದ ಘಟನೆಯೊಂದು ನಡೆದಿದೆ. ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ವಿಪಕ್ಷ ನಾಯಕರು ಭಾಗವಹಿಸಿದ್ದರು.

ಆದರೆ, ರಾಹುಲ್ ಗಾಂಧಿ ಭಾಷಣ ಮಾಡುವ ಮುನ್ನ ವೀರ್ ಸಾವರ್ಕರ್ ಬರೆದ ‘ಜಯಸ್ತುತೆ’ ಹಾಡು ಎಲ್ಲರ ಗಮನ ಸೆಳೆದಿತ್ತು. ರಾಹುಲ್ ಗಾಂಧಿ ಅವರು ವೀರ್ ಸಾವರ್ಕರ್ ಅವರನ್ನು ಆಗಾಗ್ಗೆ ಟೀಕಿಸುತ್ತಿರುತ್ತಾರೆ, ಅವರು ಬ್ರಿಟಿಷರೊಂದಿಗೆ ಸಹಕರಿಸಿದ್ದಾರೆ ಮತ್ತು ಅವರಿಂದ ಹಣ ಸ್ವೀಕರಿಸಿದ್ದರು ಎಂದು ಈ ಹಿಂದೆ ಆರೋಪಿಸಿದ್ದಾರೆ. ಸಾವರ್ಕರ್ ಬಗ್ಗೆ ಅವರ ಹೇಳಿಕೆಗಳು ಹಲವಾರು ವಿವಾದಗಳನ್ನು ಹುಟ್ಟುಹಾಕಿವೆ. ಆದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆಯ ಒತ್ತಡಕ್ಕೆ ಮಣಿದ ರಾಹುಲ್ ಇತ್ತೀಚಿನ ದಿನಗಳಲ್ಲಿ ಸಾವರ್ಕರ್ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್ ಗಾಂಧಿ, ಸಾವರ್ಕರ್ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರ ಟೀಕಾಕಾರರು ಆರೋಪಿಸುತ್ತಿರುವುದರಿಂದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಜೊತೆಗೆ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್, ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ ಪುಣೆ ನ್ಯಾಯಾಲಯವು ಇತ್ತೀಚೆಗೆ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಕುರಿತು ರಾಹುಲ್ ಗಾಂಧಿಗೆ ಸಮನ್ಸ್ ನೀಡಿತ್ತು.

ಎಂವಿಎ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಷಣಕ್ಕೂ ಮುನ್ನ ಸಾವರ್ಕರ್ ಬರೆದ ‘ಜಯಸ್ತುತೆ’ ಹಾಡನ್ನು ಪ್ಲೇ ಮಾಡಿರುವುದು ರಾಜಕೀಯ ವಲಯದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾವರ್ಕರ್ ಅವರನ್ನು ಈ ಹಿಂದೆ ರಾಹುಲ್ ಬಹಿರಂಗವಾಗಿ ಟೀಕಿಸಿದ ಘಟನೆ ಬಳಿಕ ರ್ಯಾಲಿಯಲ್ಲಿ ಈ ಹಾಡು ಕೇಳಿ ಬಂದಿರುವುದು ಕುತೂಹಲಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read