ಸಂತೆಯಲ್ಲಿ ಸೊಪ್ಪು, ತರಕಾರಿ ಮೇಲೆ ಉಗುಳಿದ ವ್ಯಾಪಾರಿ ಅರೆಸ್ಟ್

ಕಾರವಾರ: ಭಾನುವಾರದ ಸಂತೆಯಲ್ಲಿ ಸೊಪ್ಪು, ತರಕಾರಿ ಮಾರಾಟದ ವೇಳೆ ಎಂಜಲು ಉಗುಳಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕೆಳಗಿನ ನೆಗಳೂರಿನ ಅಬ್ದುಲ್ ಹಸನ್ ಸಾಬ್(50) ಬಂಧಿತ ಆರೋಪಿ. ಕಾರವಾರ ನಗರದ ರಸ್ತೆಯಲ್ಲಿ ತರಕಾರಿ ಮಾರಾಟಕ್ಕೆ ಇಟ್ಟುಕೊಂಡಿದ್ದ ಅಬ್ದುಲ್ ಹಸನ್ ಸಾಬ್ ತರಕಾರಿಗಳಿಗೆ ನೀರು ಚಿಮುಕಿಸುವ ವೇಳೆ ಎಂಜಲು ಉಗುಳುತ್ತಿದ್ದ. ಇದನ್ನು ಕಂಡ ಗ್ರಾಹಕರು ಮೊಬೈಲ್ ನಲ್ಲಿ ದೃಶ್ಯ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಹಿಂದೂ ಸಂಘಟನೆಗಳು ಪ್ರಮುಖರು ಸ್ಥಳಕ್ಕೆ ತೆರಳಿ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುರಳಿ ಗೋವೇಕರ ಎಂಬುವರು ದೂರು ನೀಡಿದ್ದು, ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read