ಈ ವಿಟಮಿನ್ ಕೊರತೆಯಿಂದ ಕಾಡುತ್ತದೆ ಪಾದಗಳಲ್ಲಿ ಸುಡುವ ವೇದನೆ

ಪ್ರತಿಯೊಬ್ಬರ ದೇಹಕ್ಕೆ ಜೀವಸತ್ವಗಳು, ಅಗತ್ಯವಾಗಿಬೇಕು. ಇದರಿಂದ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬಹುದು. ಆದರೆ ಈ ವಿಟಮಿನ್ ಗಳಲ್ಲಿ ಕೊರತೆಯಾದರೆ ದೇಹದಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಕೆಲವರು ತಮ್ಮ ಪಾದಗಳಲ್ಲಿ ಸುಡುವ ವೇದನೆಯನ್ನು ಅನುಭವಿಸುತ್ತಾರೆ. ಅದಕ್ಕೆ ಈ ವಿಟಮಿನ್ ಕೊರತೆಯೇ ಕಾರಣವಂತೆ.

ಹೌದು, ದೇಹದಲ್ಲಿ ವಿಟಮಿನ್ ಬಿ ಕೊರತೆಯಾದರೆ ಪಾದಗಳಲ್ಲಿ ಸುಡುವ ವೇದನೆ ಸಮಸ್ಯೆ ಕಾಡುತ್ತದೆಯಂತೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರ ಸೇವಿಸಿ.

ಮೊಟ್ಟೆ, ಮೊಸರು, ಓಟ್ಸ್, ಚೀಸ್, ಹಾಲು, ಮುಂತಾದವುಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆಯಂತೆ. ಹಾಗಾಗಿ ಪ್ರತಿದಿನ ಆಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಹಾಗೇ ಪಾದಗಳ ಸುಡುವ ವೇದನೆಯನ್ನು ಕಡಮೆ ಮಾಡಲು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಮುಳುಗಿಸಿಡಿ. ಇದರಿಂದ ಪಾದಗಳಿಗೆ ವಿಶ್ರಾಂತಿ ಸಿಗುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read