SHOCKING: ತೆಲಂಗಾಣದಲ್ಲಿ ಬೆಚ್ಚಿ ಬೀಳಿಸುವ ಘಟನೆ: ಹಣಕಾಸಿನ ವಿಚಾರಕ್ಕೆ ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಪುತ್ರ

ಸಂಗಮ: ಶನಿವಾರ ಮುಂಜಾನೆ ವಾರಂಗಲ್ ಜಿಲ್ಲೆಯ ಸಂಗೆಮ್ ಮಂಡಲದ ಕುಂಟಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

60 ವರ್ಷದ ಸಂತ್ರಸ್ತೆ ಮುತ್ತಿನೇನಿ ವಿನೋದಾ ಶೇ. 80 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ವಾರಂಗಲ್‌ನ ಎಂಜಿಎಂ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸಬ್‌ ಇನ್ಸ್‌ಪೆಕ್ಟರ್ ಎಲ್. ನರೇಶ್ ಅವರ ಪ್ರಕಾರ, ಆರೋಪಿ ಮುತ್ತಿನೇನಿ ಸತೀಶ್ ಮದ್ಯವ್ಯಸನಿಯಾಗಿದ್ದು, ತನ್ನ ಹೆತ್ತವರಾದ ವಿನೋದಾ ಮತ್ತು ಸಂಬಯ್ಯ ಅವರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ.

ಒಂದು ವರ್ಷದ ಹಿಂದೆ, ಅವನು ತನ್ನ ತಾಯಿಯ ಮೇಲೆ ಒಣ ಹುಲ್ಲು ಎಸೆದು ಬೆಂಕಿ ಹಚ್ಚುವ ಮೂಲಕ ಕೊಲೆ ಮಾಡಲು ಪ್ರಯತ್ನಿಸಿದ್ದ. ಆಗ ಆಕೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಳು. ಆದರೆ ಶನಿವಾರ ಬೆಳಿಗ್ಗೆ ಸತೀಶ್ ಪೆಟ್ರೋಲ್ ಬಾಟಲಿಯೊಂದಿಗೆ ಮನೆಗೆ ಬಂದಿದ್ದು, ಮಲಗಿದ್ದ ತಾಯಿಯ ಮೇಲೆ ಸುರಿದಿದ್ದಾನೆ. ಪೆಟ್ರೋಲ್‌ ವಾಸನೆಯಿಂದಾಗಿ ಸಾಂಬಯ್ಯ ಎಚ್ಚರಗೊಂಡು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದು, ಈ ವೇಳೆಗೆ ಸತೀಶ್ ಬೆಂಕಿಕಡ್ಡಿ ಗೀರಿ ಬೆಂಕಿ ಹೊತ್ತಿಸಿದ್ದಾನೆ.

ವಿನೋದಾ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯಲ್ಲಿ ಅವಳು ಸುಟ್ಟು ಕರಕಲಾಗಿದ್ದಳು. ಗಲಾಟೆ ಕೇಳಿ ನೆರೆಹೊರೆಯವರು ಮನೆಗೆ ಧಾವಿಸಿ ಬಂದು ಬೆಂಕಿ ನಂದಿಸಲು ಸಹಾಯ ಮಾಡಿದರು. ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಆಕೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ವಿನೋದಾ ಮತ್ತು ಸಾಂಬಯ್ಯ ಅವರ ಕೃಷಿ ಭೂಮಿಯನ್ನು ಸರ್ಕಾರವು ಜವಳಿ ಪಾರ್ಕ್ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ನಂತರ ಅವರಿಗೆ 20 ಲಕ್ಷ ರೂ. ಪರಿಹಾರವನ್ನು ನೀಡಲಾಯಿತು. ಇದರಲ್ಲಿ, 15 ಲಕ್ಷ ರೂ.ಗಳನ್ನು ಸತೀಶ್ ಮತ್ತು ಅವರ ಸಹೋದರಿ ಸಮಾನವಾಗಿ ಹಂಚಿಕೊಂಡರು, ಉಳಿದ 5 ಲಕ್ಷವನ್ನು ವೃದ್ಧ ದಂಪತಿಗಳ ಜೀವನೋಪಾಯಕ್ಕಾಗಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿತ್ತು.

ಸತೀಶ್ ತನ್ನ ಪಾಲನ್ನು ಬಳಸಿಕೊಂಡು ಗೀಸುಗೊಂಡ ಮಂಡಲದ ಮಚಾಪುರ್ ಗ್ರಾಮದಲ್ಲಿ ತನ್ನ ಅತ್ತೆಯ ಮನೆಯ ಬಳಿ ಕೃಷಿ ಭೂಮಿಯನ್ನು ಖರೀದಿಸಿದ್ದ. ಕಳೆದ ಆರು ತಿಂಗಳಿನಿಂದ, ಸತೀಶ್ ತನ್ನ ಹೆಚ್ಚಿನ ಹಣಕ್ಕಾಗಿ ಪೋಷಕರ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದ. ಹಣ ಉಳಿದಿಲ್ಲ ಎಂದು ಪೋಷಕರು ಪದೇ ಪದೇ ಹೇಳಿದ್ದರೂ, ಸತೀಶ್ ಕೇಳದೇ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read