ರೌಡಿಶೀಟರ್ ಹತ್ಯೆ ಪ್ರಕರಣ: 12 ಆರೋಪಿಗಳು ಅರೆಸ್ಟ್

ಬೆಂಗಳೂರು: ರೌಡಿಶೀಟರ್ ದಿನೇಶ್ ಕೊಲೆ ಮಾಡಿ ಪರಾರಿಯಾಗಿದ್ದ 12 ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್ಮೆಂಟ್ ಒಂದರಲ್ಲಿ ರೌಡಿಶೀಟರ್ ದಿನೇಶ್ ನನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅರವಿಂದ, ದಿಲೀಪ್ ಸಾಗರ್, ಅಜಯ್ ಕ್ರಿಷ್ಟೊಫರ್, ನಿಖಿಲ್, ಗೌತಮ್, ಕಾರ್ತಿಕ್, ಸತೀಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ.

ದಿಲೀಪ್ ಸಾಗರ್ ಮತ್ತು ಅಜಯ್, ವಿವಿಧ ಠಾಣೆಗಳ ರೌಡಿಶೀಟರ್ ಗಳಾಗಿದ್ದಾರೆ. ಕೊಲೆಯಾದ ದಿನೇಶ್ ಜೊತೆಗೆ ಆರೋಪಿ ಅರವಿಂದ ಓಡಾಡುತ್ತಿದ್ದ. ರೌಡಿಶೀಟರ್ ಗಳಿಗೆ ಹಫ್ತಾ ನೀಡುವಂತೆ ದಿನೇಶ್ ಬೆದರಿಕೆ ಹಾಕಿದ್ದು, ಪೊಲೀಸರಿಗೆ ದೂರು ನೀಡಿದಲ್ಲಿ ಜೀವ ತೆಗೆಯುವುದಾಗಿ ಬೆದರಿಸಿದ್ದ. ಅರವಿಂದನಿಗೂ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಆತ ದಿಲೀಪ್ ಸಾಗರ್ ಮತ್ತು ಅಜಯ್ ರೊಂದಿಗೆ ಸಂಚು ರೂಪಿಸಿ ದಿನೇಶ್ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read