ಮಂಗಳೂರು: ಮಂಗಳೂರಿನ ನಟೋರಿಯಸ್ ರೌಡಿ ಟೊಪ್ಪಿ ನೌಪಾಲ್ ಕೇರಳದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.
ಕೇರಳದ ಉಪ್ಪಳ ಎಂಬಲ್ಲಿ ದುಷ್ಕರ್ಮಿಗಳು ರೌಡಿ ನೌಫಾಲ್ ಅಲಿಯಾಸ್ ಟೊಪ್ಪಿ ನೌಫಾಲ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಟೊಪ್ಪಿ ನೌಫಾಲ್ ೨೦೧೭ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ಅಡ್ಯಾರ್ ನ ರೌಡಿ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.
ಈತನ ವಿರುದ್ಧ ಮಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಇದೀಗ ದುಷ್ಕರ್ಮಿಗಳಿಂದಲೇ ನೌಫಾಲ್ ಕೊಲೆಯಾಗಿದ್ದಾನೆ.
