ರಾಕ್ಷಸರ ಲಂಕೆಯಲ್ಲಿ ‘ರಾಮ’ನ ಮದುವೆ : ದಗ್ಗುಬಾಟಿ ಕುಟುಂಬದ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ನಟಿ

ಸದಾ ಒಂದಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟಿ ಶ್ರೀರೆಡ್ಡಿ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.

ತೆಲುಗು ಚಿತ್ರರಂಗದ ಪ್ರಮುಖ ಕುಟುಂಬವಾದ ದಗ್ಗುಬಾಟಿ ಕುಟುಂಬದ ವ್ಯಕ್ತಿಯೊಬ್ಬರ ಬಗ್ಗೆ ಶ್ರೀರೆಡ್ಡಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟ, ನಿರ್ಮಾಪಕ ರಾಣಾ ದಗ್ಗುಬಾಟಿಯ ಕಿರಿಯ ಸಹೋದರ ಅಭಿರಾಮ್ ದಗ್ಗುಬಾಟಿಯ ಮದುವೆ ಇತ್ತೀಚೆಗಷ್ಟೆ ಶ್ರೀಲಂಕಾದಲ್ಲಿ ನಡೆದಿದೆ. ಈ ಬಗ್ಗೆ ಕಮೆಂಟ್ ಮಾಡಿ ನಟಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.‘ಸೀತೆಯನ್ನೂ ರಾಮನನ್ನು ದೂರ ಮಾಡಿದ ದೇಶ, ಸೀತೆಗೆ ಹಲವು ಕಷ್ಟಗಳನ್ನು ಕೊಟ್ಟ ದೇಶ, , ರಾಕ್ಷಸ ರಾವಣನ ಲಂಕಾ, ಶ್ರೀಲಂಕಾನಲ್ಲಿ ‘ದಗ್ಗುಬಾಟಿ ಅಭಿರಾಮ’ನ ಮದುವೆ. ನಮ್ಮ ದೇಶದ ಆದರ್ಶ ದಂಪತಿ ರಾಮ-ಸೀತೆಯನ್ನು ದೂರ ಮಾಡಿದ ದೇಶದಲ್ಲಿ ನಿನ್ನ ಮದುವೆಯಾ? ರಾಕ್ಷಸರು ಎಂದಿಗೂ ರಾಕ್ಷಸರೇ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read