BIG NEWS: ಅಕ್ರಮ ವಿದ್ಯುತ್ ತಂತಿ ಬೇಲಿಗೆ ಒಂಟಿ ಸಲಗ ಬಲಿ

ಚಾಮರಾಜನಗರ: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಒಂಟಿಸಲಗ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

ಕುರುಬರಹುಂಡಿ ಗ್ರಾಮದಲ್ಲಿ ಈ ದುರತ ಸಂಭವಿಸಿದೆ. ಜಮೀನು ಮಾಲೀಕ ಶಿವರಾಜು ತನ್ನ ಜಮೀನು ರಕ್ಷಣೆಗಾಗಿ ತಂತಿಬೇಲಿ ಅಳವಡಿಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ. ಈ ತಂತಿಬೇಲಿ ತಗುಲಿ ಆನೆ ಮೃತಪಟ್ಟಿದೆ.

ಘಟನೆ ಬಳಿಕ ಜಮೀನು ಮಾಲೀಕ ಶಿವರಾಜು ಪರಾರಿಯಾಗಿದ್ದಾನೆ. ಅರಣ್ಯ ಅಧಿಕಾರಿಗಳು ಆರೋಪಿಗಾಗಿ ಶೋಧ ನಡೆಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read