BREAKING: ಬಡ್ಡಿ ಹಣ ನೀಡಲು ತಡ ಮಾಡಿದ್ದಕ್ಕೆ ಸಾಲಗಾರನ ಅಪಹರಿಸಿ ಮಾರಕಾಸ್ತ್ರದಿಂದ ಹಲ್ಲೆ

ಬೆಂಗಳೂರು: ಬಡ್ಡಿ ಹಣ ಕೊಡುವುದು ತಡವಾಗಿದ್ದಕ್ಕೆ ಸಾಲಗಾರನನ್ನು ಅಪಹರಿಸಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭೈರೇಗೌಡನಹಳ್ಳಿ ಗ್ರಾಮದ ಬಳಿ ನಡೆದಿದೆ.

ಪ್ರತಾಪ್ ಮತ್ತು ದಿಲೀಪ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ರೌಡಿಶೀಟರ್ ರಂಗನಾಥ್ ಅಲಿಯಾಸ್ ಗಣೇಶನ ಗುಡಿ ರಂಗ ಅಪಹರಣ ಮಾಡಿ ಹಲ್ಲೆ ಮಾಡಿದ್ದಾನೆ. ಗುರು, ಪ್ರತಾಪ್, ಮತ್ತಿಬ್ಬರು ಅಪಹರಣ ಮಾಡಿ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

10 ರೂಪಾಯಿ ಬಡ್ಡಿಯಂತೆ ರಂಗ 2 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಪ್ರತಿ ತಿಂಗಳು 20 ಸಾವಿರ ರೂಪಾಯಿ ಬಡ್ಡಿ ಕೊಡುತ್ತಿದ್ದ ದಿಲೀಪ್ ಈ ತಿಂಗಳ ಬಡ್ಡಿ ನೀಡುವುದು ತಡ ಮಾಡಿದ್ದಕ್ಕೆ ಅಪಹರಣ ಮಾಡಿ ಹಲ್ಲೆ ನಡೆಸಲಾಗಿದೆ.

ಕಾರ್ ನಲ್ಲಿ ಅಪಹರಿಸಿ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸ್ ಠಾಣೆಗೆ ಹಲ್ಲೆಗೊಳಗಾದ ಪ್ರತಾಪ್ ಮತ್ತು ದಿಲೀಪ್ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ರೌಡಿಶೀಟರ್ ರಂಗ ಪರಾರಿಯಾಗಿದ್ದಾನೆ. ಗಣೇಶನ ಗುಡಿ ರಂಗನಿಗಾಗಿ ಮಾದನಾಯಕನಹಳ್ಳಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಬಿಎನ್ಎಸ್ ಕಾಯ್ದೆಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read