ಗುಟ್ಕಾ ಹಾಕಿಕೊಂಡು ಎಲ್ಲೆಂದರಲ್ಲಿ ಉಗುಳಿದವನಿಗೆ ತಕ್ಕ ಪಾಠ ಕಲಿಸಿದ ಜಡ್ಜ್

ಶಿವಮೊಗ್ಗ: ಹಲವರಿಗೆ ಗುಟ್ಕಾ ಹಾಕಿಕೊಂಡು ಕಂಡಕಂಡಲ್ಲಿ ಉಗುಳುವ ದುರಭ್ಯಾಸವಿರುತ್ತದೆ. ಹೀಗೆ ಗುಟ್ಕಾ ಹಾಕಿಕೊಂಡು ಕೋರ್ಟ್ ಗೋಡೆಗೆ ಉಗುಳುತ್ತಿದ್ದ ವ್ಯಕ್ತಿಯೋರ್ವನಿಗೆ ಕೋರ್ಟ್ ಜಡ್ಜ್ ತಕ್ಕ ಪಾಠ ಕಲಿಸಿದ್ದಾರೆ.

ಗುಟ್ಕಾ ಹಾಕಿದ್ದ ವ್ಯಕ್ತಿಯೋರ್ವ ಶಿವಮೊಗ್ಗ ಜಿಲ್ಲೆಯ ಭದ್ರತಾವತಿ ಸಿವಿಲ್ ಹೆಚ್ಚುವರಿ ಕೋರ್ಟ್ ಹೊರ ಭಾಗದ ಗೋಡೆಗೆ ಉಗುಳುತ್ತಿದ್ದ. ಇದನ್ನು ಆಕಸ್ಮಿಕವಾಗಿ ನೋಡಿದ ನ್ಯಾಯಾಧೀಶರು, ಆತನನ್ನು ತಕ್ಷಣ ಕರೆದಿದ್ದಾರೆ.

ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅಲ್ಲದೇ ಗೋಡೆಗೆ ಉಗುಳಿದ ವ್ಯಕ್ತಿಯಿಂದಲೇ ಗೋಡೆ ಕ್ಲೀನ್ ಮಾಡಿಸಿದ್ದಾರೆ. ಈ ರೀತಿ ಇನ್ನೊಮ್ಮೆ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರಿಗೂ ತಿಳಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read