BIG NEWS: ಬಿಜೆಪಿ –ಜೆಡಿಎಸ್ ಸೀಟು ಹಂಚಿಕೆ ಗೊಂದಲ ಪರಿಹಾರಕ್ಕೆ ಮಹತ್ವದ ನಿರ್ಧಾರ

ನವದೆಹಲಿ: ಬಿಜೆಪಿ, ಜೆಡಿಎಸ್ ಮೈತ್ರಿ ಸಂಬಂಧ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೀಟು ಹಂಚಿಕೆ ಗೊಂದಲ ಬಗೆಹರಿಸಲು ತಂಡ ರಚನೆಗೆ ನಿರ್ಧಾರ ಕೈಗೊಂಡಿದ್ದಾರೆ

ಸೀಟು ಹಂಚಿಕೆ ಗೊಂದಲ ಪರಿಹರಿಸಲು ಚರ್ಚೆ ನಡೆದು ತಂಡ ರಚನೆಗೆ ನಿರ್ಧಾರ ಕೈಗೊಂಡಿದ್ದಾರೆ. ಉಭಯ ಪಕ್ಷಗಳಿಂದ ತಲಾ ನಾಲ್ವರು ನಾಯಕರ ತಂಡವನ್ನು ರಚಿಸಲಾಗುವುದು. ಒಟ್ಟು 8 ನಾಯಕರ ತಂಡ ರಚಿಸುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಭೆಯಲ್ಲಿ ಚರ್ಚೆ ನಡೆದಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 4-5 ಸ್ಥಾನ ಕೇಳಿದೆ. ಜೆಡಿಎಸ್ ಪಕ್ಷ ಕೇಳಿದ ಕ್ಷೇತ್ರಗಳ ಬಗ್ಗೆ ಮತ್ತು ಸ್ಥಾನಗಳ ಹಂಚಿಕೆ ಕುರಿತಾಗಿ ಉಭಯ ಪಕ್ಷಗಳಿಂದ ನೇಮಕವಾಗುವ ತಂಡ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read