BREAKING NEWS: ಉಗ್ರರ ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತದೇಹ ರವಾನೆ ಮತ್ತಷ್ಟು ವಿಳಂಬ

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ಮೃತದೇಹ ರವಾನೆ ಮತ್ತಷ್ಟು ವಿಳಂಬವಾಗಿದೆ.

ಮಂಜುನಾಥ್ ಮೃತದೇಹವಿರುವ ವಿಮಾನ ಶ್ರೀನಗರದಿಂದ ದೆಹಲಿಗೆ 7:30ಕ್ಕೆ ಲ್ಯಾಂಡ್ ಆಗಲಿದೆ. ದೆಹಲಿಗೆ ಲ್ಯಾಂಡ್ ಆದ ಬಳಿಕ ಬೆಂಗಳೂರಿಗೆ ಮೃತದೇಹ ಶಿಫ್ಟ್ ಆಗಲಿದೆ. ದೆಹಲಿಯಿಂದ ಇಂದು ಮಧ್ಯರಾತ್ರಿ 1ಗಂಟೆಗೆ ವಿಮಾನ ಹೊರಡಲಿದೆ.

ಬೆಂಗಳೂರಿಗೆ ನಾಳೆ ಬೆಳಗಿನ ಜಾವ ಮೃತದೇಹ ಬಂದು ತಲುಪಲಿದ್ದು, ಬಳಿಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಮಾರ್ಗವಾಗಿ ರವಾನಿಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read