ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ‘ಅದೃಷ್ಟ’

ಪ್ರತಿ ಬೆಳಗು ಹೊಸತನ ತರಲಿ ಎನ್ನುವುದು ಎಲ್ಲರ ಆಸೆ. ರಾತ್ರಿಯ ನೋವು, ಒತ್ತಡ ಬೆಳಿಗ್ಗೆ ಮಾಯವಾಗಿರಲಿ ಅಂತಾ ಎಲ್ಲರು ಬಯಸ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ವಿವರವಾಗಿ ಹೇಳಲಾಗಿದೆ. ಹಾಸಿಗೆಯಿಂದ ಎದ್ದ ನಂತ್ರ ಏನು ಮಾಡಿದ್ರೆ ಒಳ್ಳೆಯ ದಿನ ನಮ್ಮದಾಗುವ ಜೊತೆಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.

ಹಾಸಿಗೆಯಿಂದ ಏಳುವ ಮೊದಲು ನಿಮ್ಮ ಹಸ್ತಗಳನ್ನು ನೀವು ನೋಡಿಕೊಳ್ಳಬೇಕು. ಕೈಗಳಲ್ಲಿ ದೇವಿ ಲಕ್ಷ್ಮಿ, ಸರಸ್ವತಿ ಹಾಗೂ ವಿಷ್ಣು ವಾಸವಾಗಿರ್ತಾರೆ. ಇದರಿಂದಾಗಿ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.

ದೇವರ ಮನೆಯನ್ನು ಸ್ವಚ್ಛಗೊಳಿಸಬೇಕು. ದೇವರ ಮನೆ ಸುಂದರವಾಗಿದ್ದರೆ ದೇವತೆಗಳು ಪ್ರಸನ್ನವಾಗುತ್ತಾರೆ. ಜೊತೆಗೆ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ.

ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಭೂಮಿ ಮೇಲೆ ಕಾಲಿಡುವ ಮುನ್ನ ಭೂತಾಯಿಗೆ ನಮಸ್ಕರಿಸಿ. ನಮ್ಮ ಭಾರವನ್ನು ಹೊತ್ತುಕೊಳ್ಳುವ ಭೂತಾಯಿಗೆ ನಾವು ನಮಿಸಬೇಕಾಗುತ್ತದೆ.

ಬೆಳಿಗ್ಗೆ ಮೊದಲು ಮಾಡಿದ ಆಹಾರವನ್ನು ಹಸುವಿಗೆ ನೀಡಬೇಕು. ಇದರಿಂದ ಮೋಕ್ಷದ ಬಾಗಿಲು ನಮಗಾಗಿ ತೆರೆಯುತ್ತದೆ.

ಸೂರ್ಯ ನಮಸ್ಕಾರ ಮಾಡುವ ಜೊತೆಗೆ ನೀರನ್ನು ಅರ್ಪಣೆ ಮಾಡಬೇಕು. ಇದರಿಂದ ಗೌರವ, ಸನ್ಮಾನ ಪ್ರಾಪ್ತಿಯಾಗುತ್ತದೆ.

ಯಾವುದೇ ದೇವರ ಪೂಜೆಯನ್ನು ನೀವು ಮಾಡಿ, ಆದ್ರೆ ಎದ್ದ ನಂತ್ರ ಗಾಯತ್ರಿ ಮಂತ್ರವನ್ನು ಮೊದಲು ಜಪಿಸಿ. ಇದರಿಂದ ಆತ್ಮ ಶುದ್ಧವಾಗುವ ಜೊತೆಗೆ ನೀವು ಮಾಡಿದ ಹಿಂದಿನ ತಪ್ಪುಗಳು ಅಳಿಸಿಹೋಗುತ್ತವೆ.

ಒಂದು ರೂಪಾಯಿ ನಾಣ್ಯವನ್ನು ದೇವರ ಮುಂದಿಟ್ಟು ಮರುದಿನ ಅದನ್ನು ತೆಗೆದು ಪರ್ಸ್ ನಲ್ಲಿಟ್ಟುಕೊಳ್ಳಿ. ಹೀಗೆ ಮಾಡಿದಲ್ಲಿ ಆರ್ಥಿಕ ನಷ್ಟವುಂಟಾಗುವುದಿಲ್ಲ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read