ಮನೆಯಲ್ಲಿ ಸದಾ ಸಮಸ್ಯೆ ಕಾಡುತ್ತಿದ್ದರೆ ಅನುಸರಿಸಿ ಈ ಉಪಾಯ

 

ಮನೆಯಲ್ಲಿ ಒಬ್ಬರಾದ್ಮೇಲೆ ಒಬ್ಬರು ಅನಾರೋಗ್ಯಕ್ಕೊಳಗಾಗುತ್ತಿದ್ದರೆ, ಹಣದ ಸಮಸ್ಯೆ ಕಾಡುತ್ತಿದ್ದರೆ ಇಲ್ಲವೆ ಸಣ್ಣ ಕಾರ್ಯಕ್ಕೂ ಅಡೆತಡೆಯುಂಟಾದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ಕೆಟ್ಟ ಪ್ರಭಾವವನ್ನು ತೊಡೆದು ಹಾಕಲು ಸಣ್ಣ ಉಪಾಯ ನೆರವಾಗುತ್ತದೆ.

ಮನೆಯಲ್ಲಿ ಸಮಸ್ಯೆ ಇದ್ದರೆ ಬೆಳ್ಳಂಬೆಳಿಗ್ಗೆ ಸಾಂಬ್ರಾಣಿ, ಕರ್ಪೂರ, ದೇಶಿ ದನದ ತುಪ್ಪ, ಶ್ರೀಗಂಧದ ಪುಡಿಯನ್ನು ಸೇರಿಸಿ ದನದ ಸಗಣಿಯಲ್ಲಿ ಹೊಗೆ ಹಾಕಿ. ಈ ಹೊಗೆಯನ್ನು ಮನೆಯ ಕೋಣೆ ಕೋಣೆಗೆ ತೋರಿಸಿ. ಈ ಹೊಗೆ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ.

ಈ ಎಲ್ಲ ವಸ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಪೂಜೆಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ಎಲ್ಲ ವಸ್ತು ಮನೆಯ ಸುತ್ತಮುತ್ತಲ ವಾತಾವರಣವನ್ನು ಶುದ್ಧವಾಗಿರಿಸುತ್ತದೆ. ಈ ಧೂಪವನ್ನು ಮನೆಗೆ ಹಾಕುವುದ್ರಿಂದ ದೇವಾನುದೇವತೆಗಳ ಕೃಪೆ ಮನೆ ಮೇಲಿರುತ್ತದೆ. ಧನ ಸಂಬಂಧಿ ಸಮಸ್ಯೆ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read