ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಒಂದು ಉಪ ನೋಂದಣಾಧಿಕಾರಿ ಕಚೇರಿಯು ಎರಡು ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳಲ್ಲಿಯೂ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಇದರ ಅನ್ವಯ ಜೂನ್ 1ರಂದು ರಾಜ್ಯದ 35 ಉಪ ನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಬೆಂಗಳೂರ ನಗರ ಜಿಲ್ಲೆಯ ಬಸವನಗುಡಿ, ಗಾಂಧಿನಗರ, ಜಯನಗರ, ರಾಜಾಜಿನಗರ, ಶಿವಾಜಿನಗರ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ಚಿತ್ರದುರ್ಗ, ಬಾಗೇಪಲ್ಲಿ, ದಾವಣಗೆರೆ, ರಾಮನಗರ, ಶಿವಮೊಗ್ಗ, ಕುಣಿಗಲ್, ಕೋಲಾರ, ಮೂಡಲಗಿ, ಇಳಕಲ್, ಹುಬ್ಬಳ್ಳಿ ಉತ್ತರ, ಗಜೇಂದ್ರಗಢ, ಕುಮಟಾ, ಹಾವೇರಿ, ವಿಜಯಪುರ, ಕುದೇರು, ಸಕಲೇಶಪುರ, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರು ನಗರ, ಮಳವಳ್ಳಿ, ಮೈಸೂರು ದಕ್ಷಿಣ, ಉಡುಪಿ, ಗಂಗಾವತಿ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಹೂವಿನಹಡಗಲಿ ಉಪ ನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.