ಉತ್ತರ ಭಾರತದಲ್ಲಿ ದಟ್ಟ ಮಂಜು : 134 ವಿಮಾನಗಳ ಹಾರಾಟ ವಿಳಂಬ, IMD ರೆಡ್ ಅಲರ್ಟ್ ಘೋಷಣೆ

ಜಮ್ಮು ಮತ್ತು ಕಾಶ್ಮೀರ, ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ದಟ್ಟ ಮಂಜಿಗಾಗಿ ಭಾರತ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.

ಈ ಎಚ್ಚರಿಕೆಯು ಹರಿಯಾಣ ಮತ್ತು ಪಂಜಾಬ್ ಗೆ ಐದು ದಿನಗಳು ಮತ್ತು ಉತ್ತರ ಪ್ರದೇಶಕ್ಕೆ ಮೂರು ದಿನಗಳವರೆಗೆ ವ್ಯಾಪಿಸಿದೆ. ದಟ್ಟ ಮಂಜಿನಿಂದ ವಿಮಾನ ಹಾರಾಟ ಹಾಗೂ ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ದಟ್ಟ ಮಂಜಿನಿಂದ ರಸ್ತೆ ಅಪಘಾತಗಳು ಕೂಡ ಹೆಚ್ಚಳವಾಗುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ದಟ್ಟ ಮಂಜಿನಿಂದಾಗಿ ವಿಮಾನ ಹಾರಾಟಕ್ಕೆ ಬಹಳ ಅಡಚಣೆಯಾಗಿದೆ. ಇದರಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಸುಮಾರು 134 ವಿಮಾನಗಳು ವಿಳಂಬವಾದವು. ಅಂತೆಯೇ, ನವದೆಹಲಿ ರೈಲ್ವೆ ನಿಲ್ದಾಣದಲ್ಲಿ 22 ರೈಲುಗಳು ವಿಳಂಬವನ್ನು ಅನುಭವಿಸಿದವು, ಶೀತ ಹವಾಮಾನದ ಹಿನ್ನೆಲೆ ಪ್ರಯಾಣಿಕರು ಕೂಡ ತೊಂದರೆ ಅನುಭವಿಸಿದರು.

ಶುಕ್ರವಾರ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದು, ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 356 ಕ್ಕೆ ಇಳಿದಿದೆ. ಇದರ ಹೊರತಾಗಿಯೂ, ಮುಂದಿನ ಎರಡು ದಿನಗಳವರೆಗೆ ಗಾಳಿಯ ಗುಣಮಟ್ಟವು “ಅತ್ಯಂತ ಕಳಪೆ” ಯಾಗಲಿದೆ ಎಂದು ಹೇಳಲಾಗಿದೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read