ಪ್ರವಾದಿಗೆ ನಿಂದಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ, ಠಾಣೆಗೆ ಕರೆತಂದು ಗುಂಡಿಟ್ಟ ಪೊಲೀಸರು

ಇಸ್ಲಾಮಾಬಾದ್: ಪ್ರವಾದಿಗೆ ಅವಮಾನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಆತನನ್ನು ವಶಕ್ಕೆ ಪಡೆದ ಪಾಕಿಸ್ತಾನ ಪೊಲೀಸರು ಠಾಣೆಯಲ್ಲಿಯೇ ಗುಂಡಿಗೆ ಹತ್ಯೆ ಮಾಡಿದ್ದಾರೆ. ಕ್ವೆಟ್ಟಾ ನಗರದಲ್ಲಿ ಸೈಯದ್ ಖಾನ್ ಎಂಬಾತನನ್ನು ಗುಂಡು ಹಾರಿಸಿ ಪೊಲೀಸರು ಹತ್ಯೆ ಮಾಡಿದ್ದಾರೆ. ಗುಂಡಿಕ್ಕಿದ ಪೊಲೀಸ್ ಅಧಿಕಾರಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಕ್ವೆಟ್ಟಾ ನಗರದ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಖುರ್ರಮ್ ಮಾಹಿತಿ ನೀಡಿ, ಪ್ರವಾದಿ ನಿಂದಿಸಿದ ವದಂತಿ ಹಿನ್ನೆಲೆಯಲ್ಲಿ ಜನ ರೊಚ್ಚಿಗೆದ್ದು ಸೈಯದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತನನ್ನು ಜನರ ಗುಂಪಿನಿಂದ ಪೊಲೀಸರು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಅಲ್ಲಿಯೇ ಆತನಿಗೆ ಗುಂಡಿಗೆ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read