ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಿಣಿಸುಲ್ತಾನ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಯುವಕರಿಗೆ ಹೇರ್ ಕಟಿಂಗ್ ಮಾಡಲು ನಿರಾಕರಿಸಿದ ಘಟನೆ ನಡೆದಿದೆ.
ಹೀಗೆ ನಿರಾಕರಿಸಿದ ಆರೋಪದಡಿ ಅಂಗಡಿ ಮಾಲೀಕನ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ಕಿಣಿಸುಲ್ತಾನ ಗ್ರಾಮದಲ್ಲಿ ತಾತ್ಕಾಲಿಕವಾಗಿ ಕ್ಷೌರದ ಅಂಗಡಿ ಬಂದ್ ಮಾಡಲಾಗಿದೆ.
ಪರಿಶಿಷ್ಟ ಜಾತಿಯವರು ಆಳಂದಕ್ಕೆ ಹೋಗಿ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದಾರೆ. ನಾವು ಕೂಡ ಹಣ ಕೊಡುತ್ತೇವೆ. ನಮಗೂ ಕಟಿಂಗ್ ಮಾಡಿ ಎಂದು ಮನವಿ ಮಾಡಿದರೂ ಅಂಗಡಿಯ ಮಾಲೀಕ ನಿರಾಕರಿಸಿದ್ದಾನೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮಾಹಿತಿ ಪಡೆದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಸಂಧಾನದ ನಂತರ ಅಂಗಡಿಯವರು ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.