BREAKING : CM ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ ನಡುವೆ ಜಗಳ ವದಂತಿ : ಕಿಡಿಗೇಡಿ ವಿರುದ್ಧ ‘FIR’ ದಾಖಲು.!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಗಳ ವದಂತಿ ಹರಡಿದ ಕಿಡಿಗೇಡಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ವಕೀಲ ಸಿ.ಆರ್ ದೀಪು ಎಂಬುವವರು ನೀಡಿದ ದೂರಿನ ಮೇರೆಗೆ ಕನ್ನಡಚಿತ್ರರಂಗದ ಹೆಸರಿನ ಇನ್ ಸ್ಟಾಂ ಖಾತೆದಾರನ ಮೇಲೆ ಪ್ರಕರಣ ದಾಖಲಾಗಿದೆ. ಇನ್ ಸ್ಟಾಗ್ರಾಂ ಖಾತೆಯಲ್ಲಿ ‘ಕನ್ನಡ ಚಿತ್ರರಂಗ’ ಎಂಬ ಹೆಸರಿನಲ್ಲಿ ಖಾತೆಯಲ್ಲಿ ವಿಡಿಯೋವೊಂದು ಅಪ್ ಲೋಡ್ ಆಗಿತ್ತು. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಸಭೆಯಲ್ಲಿ ಡಿಕೆ ಶಿವಕುಮಾರ್ ದೂಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಈತ ಎಐ ಮೂಲಕ ಇಂತಹ ವಿಡಿಯೋ ಸೃಷ್ಟಿ ಮಾಡಿದ್ದನು. ಸದ್ಯ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read