BREAKING NEWS: ನಾನೇನು ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಂಡಿಲ್ಲ: ಶಿವರಾಜ್ ಕುಮಾರ್

ಬೆಂಗಳೂರು: ನಾವು ಕಲಾವಿದರು, ನಮಗೆ ಎಲ್ಲಾ ಭಾಷೆ ಮುಖ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಕಮಲ್ ಹಾಸನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಮಲ್ ಹಾಸನ್ ಕ್ಷಮೆ ಕೇಳುವ ಬಗ್ಗೆ ನಾನು ಹೇಳುವುದಿಲ್ಲ. ನಾನು ನಟ ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿ. ಅವರು ಬೆಂಗಳೂರಿಗೆ ಬಂದಾಗ ಕೇಳಬೇಕಿತ್ತು ಎಂದಿದ್ದಾರೆ.

ನಾನು ಯಾರು ಅಂತ ನಮ್ಮ ತಂದೆಗೆ ಗೊತ್ತು. ನಾನು ಯಾರು ಅಂತ ಕರ್ನಾಟಕದ ಜನರಿಗೆ ಗೊತ್ತು. ನಾನು ಕರ್ನಾಟಕಕ್ಕೆ ಏನು ಮಾಡಿದ್ದೇನೆ ಎಂದು ಜನಕ್ಕೆ ಗೊತ್ತು ಎಂದು ಶಿವಣ್ಣ ಹೇಳಿದ್ದಾರೆ.

ನಾನೇನು ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. ಭಾಷೆ ಮಾತನಾಡುತ್ತಿದ್ದಾರೆ ಅಂದಾಗ ನಾನು ಕೈತಟ್ಟಿದ್ದು ನಿಜ. ಆ ಸಮಯದಲ್ಲಿ ಏನು ಮಾತನಾಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ ಎಂದು ಕಮಲ್ ಹಾಸನ್ ಹೇಳಿಕೆಯ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read