ಮುಂಬೈ : ಮರಾಠಾ ಮೀಸಲಾತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಕರ್ಫ್ಯೂ ವಿಧಿಸಲಾಗಿದೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ತೀರ್ಥಪುರಿ ನಗರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ನಲ್ಲಿ ಮರಾಠಾ ಕೋಟಾ ಪ್ರತಿಭಟನಾಕಾರರ ಗುಂಪು ಸೋಮವಾರ ರಾಜ್ಯ ಸಾರಿಗೆ ಬಸ್ಗೆ ಬೆಂಕಿ ಹಚ್ಚಿದ ನಂತರ ಈ ಘಟನೆ ನಡೆದಿದೆ. ಘಟನೆಯ ನಂತರ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಟಿಸಿ) ಮುಂದಿನ ಸೂಚನೆ ಬರುವವರೆಗೆ ಜಲ್ನಾ ಜಿಲ್ಲೆಯಲ್ಲಿ ತನ್ನ ಬಸ್ಸುಗಳ ಸಂಚಾರವನ್ನು ನಿಲ್ಲಿಸಿದೆ.
#WATCH | Jalna, Maharashtra: Maratha protestors set a State Transport bus on fire at Chhatrapati Shivaji Maharaj Chowk of Tirthpuri city of Ambad taluka. The Maratha community has been protesting against the state Govt on the issue of Maratha reservation.
(Viral video,… pic.twitter.com/O7gt2TVgvH
— ANI (@ANI) February 26, 2024
ಬಸ್ ಗೆ ಬೆಂಕಿ ಹಚ್ಚಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಂಎಸ್ ಆರ್ ಟಿಸಿಯ ಅಂಬಾದ್ ತಾಲ್ಲೂಕಿನ ಡಿಪೋ ಮ್ಯಾನೇಜರ್ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸೋಮವಾರ ಮಧ್ಯರಾತ್ರಿಯಿಂದ ಮುಂದಿನ ಆದೇಶದವರೆಗೆ ಅಂಬಾದ್ ತಾಲ್ಲೂಕಿನಲ್ಲಿ ಕರ್ಫ್ಯೂ ವಿಧಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.