ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತಿ ಅನುದಾನದ ಹಣವನ್ನೂ ನುಂಗಿ ಹಾಕಿದ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಗಂಭೀರ ಆರೋಪ

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತಿಗೆ ನೀಡಿದ್ದ ಅನುದಾನದಲ್ಲಿ ಬಳಕೆ ಆಗದೇ ಉಳಿದ ₹1,494 ಕೋಟಿಯನ್ನು ಸಿದ್ದರಾಮಯ್ಯ ಸರ್ಕಾರ ಯಾರಿಗೂ ಕಾಣದಂತೆ ನುಂಗಿ ಹಾಕಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ಬೆಳಗಾವಿ ಅಧಿವೇಶನದಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಬಳಕೆ ಆಗದ ಅನುದಾನದ ಲೆಕ್ಕ ನೀಡಿದ್ದರು. ಆದರೆ, ಆ ಅನುದಾನ ರಾಜ್ಯದ ಬೊಕ್ಕಸ ಸೇರದೆ ಖದೀಮರ ಜೇಬು ಸೇರಿದೆ.

ಸಾವಿರಾರು ಕೋಟಿ ಅನುದಾನ ಎಲ್ಲಿಗೆ ಹೋಯಿತು, ಯಾರ ಜೇಬು ಸೇರಿತು ಎನ್ನುವ ಲೆಕ್ಕವೇ ಆರ್ಥಿಕ ಇಲಾಖೆಯಲ್ಲಿ ಇಲ್ಲ. ಲೂಟಿ ಮಾಡಲೆಂದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಆ ಹಣವನ್ನು ನುಂಗಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read