ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ಸಾವಿರ ಬಾಗಿಲಾಗಿದೆ: ಬಿಜೆಪಿ ವಾಗ್ದಾಳಿ

ಬೆಂಗಳೂರು: ಡಿಸಿಎಂ ಹುದ್ದೆ ಹೆಚ್ಚಳ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಸಚಿವರೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ವಿಚಾರವಾಗಿ ಸರ್ಕಾರದ ನಡೆಗೆ ರಾಜ್ಯ ಬಿಜೆಪಿ ಕಿಡಿಕಾರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮನೆಯೊಂದು ಸಾವಿರ ಬಾಗಿಲಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಬದಲು ಸದಾ ಕುರ್ಚಿ ಜಗಳದಲ್ಲಿಯೇ ಸಿಎಂ ಹಾಗೂ ಡಿಸಿಎಂ ಬಣಗಳು ನಿರತವಾಗಿವೆ ಎಂದು ಬಿಜೆಪಿ ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಲೂಟಿ ಹೊಡೆಯುವುದರಲ್ಲಿ ಸ್ಪರ್ಧೆಗೆ ಬೀಳುವ ನಿಮ್ಮ ಬಣಗಳು, ಅಭಿವೃದ್ಧಿ ವಿಚಾರ ಬಂದಾಗ ಮೌನವಾಗುವುದು ಏಕೆ? ಲೂಟಿ ಹೊಡೆಯುವುದರಲ್ಲಿ, ಕುರ್ಚಿ ಗಿಟ್ಟಿಸಲು ನಿಮ್ಮ ಬಣಗಳಿಗಿರುವ ಕಾಳಜಿ, ಕೊಂಚ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸಹ ಇರಲಿ ಎಂದು ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read