ಬೆಂಗಳೂರು :ರಾಜ್ಯದಲ್ಲಿ ಪ್ರಕರಣಗಳ ನಿರ್ವಹಣೆಗೆ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿದೆ.ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖ-1ರ ಸುತ್ತೋಲೆ ಅನುಸಾರ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ವಿಷಯಗಳನ್ನು ನಿರ್ವಹಿಸುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಸುತ್ತೊಲೆಯನ್ನು ಈಗಾಗಲೇ ಹೊರಡಿಸಲಾಗಿತ್ತು.
ಆದರೆ, ಕರ್ನಾಟಕ ಗೌರವಾನ್ವಿತ ಉಚ್ಚ ನ್ಯಾಯಾಯಲಯವು, ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಡಬ್ಲ್ಯೂಪಿ ಸಂಖ್ಯೆ: 52846/2016, ದಿನಾಂಕ: 16/06/2023) ಪ್ರಕರಣದಲ್ಲಿ ಕಂಡಿಕೆ ಸಂಖ್ಯೆ: 19 ರಲ್ಲಿ ಈ ಕೆಳಗಿನಂತೆ ಅಭಿಪ್ರಾಯ ಮತ್ತು ನಿರ್ದೇಶನವನ್ನು ನೀಡಿರುತ್ತದೆ.
“19. Therefore, it is appropriate to remind the Police Department/Officers that, when any dispute arise between two parties with regard to the Civil Rights, i.e., either for declaration of title or possession over the properties or any other rights, which is of a civil nature, the police have no right to ask for documents from the parties in the name of adjudication and the police have no power to decide the civil rights of the parties and it is only the jurisdictional Civil Court, who is the Competent Adjudicating Authority to decide the same and not the police. It is the duty of the Department of Home Affairs to ensure that the police officers shall not interfere with the civil disputes and the Department of Home Affairs shall circulate the instruction/circular in this regard.”
ಈ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವ ಕುರಿತಂತೆ ಮಾರ್ಗದರ್ಶಿ ಸೂಚಿಗಳನ್ನು ಈ ಸುತ್ತೋಲೆ ಅಡಿಯಲ್ಲಿ ನೀಡಲಾಗಿದ್ದು, ಕಾರಣ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ವಯ ಹಾಗೂ ಮಾರ್ಗಸೂಚಿ ಅನುಸಾರ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವುದು.
ಈಗಾಗಲೇ ಎ. ಮೊದಲು ಪೊಲೀಸ್ ಅಧಿಕಾರಿಗಳು ಸಿವಿಲ್ ಸ್ವರೂಪದ ವ್ಯಾಜ್ಯ ಅಥವಾ ಮೊಕದ್ದಮೆಗಳು ಎಂತಹ ವಿಷಯಗಳಿಗೆ ಸಂಬಂಧಪಡುತ್ತವೆ? ಎಂಬುದರ ಬಗ್ಗೆ ಕಂಡುಕೊಳ್ಳುವುದು ಅಗತ್ಯ ಸರ್ವೋಚ್ಛ ನ್ಯಾಯಾಲಯವು ಮತ್ತು ಉಚ್ಚ ನ್ಯಾಯಾಲಯಗಳು ಅಭಿಪ್ರಾಯ ಮತ್ತು ತೀರ್ಪುಗಳನ್ನು ನೀಡಿದಂತೆ ಯಾವ ವ್ಯಾಜ್ಯದಲ್ಲಿ ಅಪರಾಧಿಕತ್ವ ಅಥವಾ ಅಪರಾಧವೆಸಗಿದ ಮನೋಭಾವ ಮತ್ತು ಕೃತ್ಯಗಳು ಕಂಡುಬರದೆ ಹೋದಲ್ಲಿ ಅಂತಹ ಸ್ವರೂಪದ ವ್ಯಾಜ್ಯಗಳನ್ನು ಸಿಎಲ್ ಸ್ವರೂಪದ ವ್ಯಾಜ್ಯಗಳೆಂದು ಪರಿಗಣಿಸಬಹುದಾಗಿರುತ್ತದೆ. ಉದಾಹರಣೆಗೆ, ಯಾವುದೇ ಅಪರಾಧಿಕತ್ವ ಇಲ್ಲದ-
i. ಕರಾರು ಅಥವಾ ಒಪ್ಪಂದಗಳ ಉಲ್ಲಂಘನೆ,
ii. ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವ್ಯಾಜ್ಯಗಳು,
iii. ಸ್ಥಿರಾಸ್ತಿಯ ಮೇಲಿನ ಮಾಲೀಕತ್ವ ಅಥವಾ ಹಿತಾಸಕ್ತಿಯ ಘೋಷಣೆಗೆ ಸಂಬಂಧಿಸಿದ ವ್ಯಾಜ್ಯಗಳು,
iv.
ಸ್ಥಿರಾಸ್ತಿಯ ಮೇಲಿನ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳು,
V. ಪೂಜಾ ಹಕ್ಕುಗಳು ಮತ್ತು ಪೂಜಾ ಸ್ಥಳಗಳ ನಿರ್ವಹಣೆಗೆ ಸಂಬಂಧಿಸಿದ ವ್ಯಾಜ್ಯಗಳು,
vi. ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಾದಗಳು,
vii .
2.
ಮೇಲ್ನೋಟಕ್ಕೆ ಕ್ರಿಮಿನಲ್ ಹೊಣೆಗಾರಿಕೆ ಸ್ಪಷ್ಟವಾಗಿಲ್ಲದ, ಆದರೆ ಸಿವಿಲ್ ಸ್ವರೂಪದ ವ್ಯಾಜ್ಯಗಳು ಮೇಲ್ನೋಟಕ್ಕೆ ಕಂಡುಬರುವಂತಹ ಪ್ರಕರಣಗಳು.
(1) ದೂರುದಾರರು ಸಿವಿಲ್ ವ್ಯಾಜ್ಯವಿರುವ ಮಾಹಿತಿಯುಳ್ಳ ದೂರನ್ನು ಠಾಣಾಧಿಕಾರಿಗೆ ಸಲ್ಲಿಸಿದಾಗ, ಅಂತಹ ಸಂದರ್ಭದಲ್ಲಿ ಠಾಣಾಧಿಕಾರಿಯು ಆ ದೂರು ಅಥವಾ ಮಾಹಿತಿಯನ್ನು ಪರಿಶೀಲಿಸಿದಾಗ, ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯವೆಂದು ಕಂಡುಬಂದಾಗ, ಈ ವಿಷಯವನ್ನು ಠಾಣಾ ದಿನಚರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಹಾಜರಿರುವ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರಿನಲ್ಲಿ ಸಿವಿಲ್ ಸ್ವರೂಪದ ವ್ಯಾಜ್ಯ ಕಂಡುಬಂದಿರುವುದರಿಂದ ಪರಿಹಾರಕ್ಕಾಗಿ ಸಕ್ಷಮ సివిలా ನ್ಯಾಯಾಲಯಕ್ಕೆ ದಾವೆ ದಾಖಲಿಸುವುದು ಸೂಕ್ತವೆಂದು ತಿಳಿಸುವ ಹಿಂಬರಹವನ್ನು ನೀಡುವುದು.
2) ಆದರೆ, ಸ್ವೀಕರಿಸಿದ ಮಾಹಿತಿ ಅಥವಾ ದೂರಿನಲ್ಲಿ ಅಪರಾಧಿತ್ವದ ಅಂಶಗಳು ಕಂಡುಬಂದು, ಆದರೆ ಸಂಜ್ಞೆ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರದೇ ಇದ್ದಾಗ, ಠಾಣಾಧಿಕಾರಿಯು ಸಂಜ್ಞೆ ಅಪರಾಧಿಕ ಅಂಶಗಳು ಕಂಡುಕೊಳ್ಳುವ ಕುರಿತಂತೆ ಪ್ರಾಥಮಿಕ ವಿಚಾರಣೆಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಲಲಿತಾ ಕುಮಾರಿ ಹಾಗೂ ಇತರರು ವಿರುದ್ಧ ಉತ್ತರ ಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಪ್ರಾಥಮಿಕ ವಿಚಾರಣೆಯನ್ನು ಕೈಗೊಳ್ಳಬಹುದು.
ಒಂದು ವೇಳೆ ಸ್ವೀಕರಿಸಿದ ದೂರಿನಲ್ಲಿ ಆಪಾದಿತ ಅಪರಾಧಿಕ ಕೃತ್ಯವು ಮೂರು ವರ್ಷಗಳಿಗಿಂತ ಮೇಲ್ಪಟ್ಟು, ಆದರೆ ಏಳು ವರ್ಷಗಳಿಗಿಂತ ಕಡಿಮೆ ಅವಧಿಗೆ ಶಿಕ್ಷೆಗೊಳಪಡುವ ಅಪರಾಧವಿರುವುದು ಕಂಡುಬಂದಿದ್ದು, ಆದರೆ ಮೇಲ್ನೋಟಕ್ಕೆ ತನಿಖೆಗೆ ಒಳಪಡಬಹುದಾದ ಪ್ರಕರಣವಲ್ಲವೆಂದು ಕಂಡುಬಂದಾಗ ಠಾಣಾಧಿಕಾರಿಯು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಕಲಂ 173(3) ಅಡಿಯಲ್ಲಿ ಪೊಲೀಸ್ ಉಪ ವಿಭಾಗಾಧಿಕಾರಿಗಳ ಹುದ್ದೆಗೆ ಕಡಿಮೆ ಇಲ್ಲದ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಾಥಮಿಕ ವಿಚಾರಣೆ ಕೈಗೊಳ್ಳುವ ಕುರಿತಂತೆ ಲಿಖಿತ ಅನುಮತಿ ಪಡೆದುಕೊಂಡು, ವಿಚಾರಣೆಯನ್ನು ಕೈಗೊಳ್ಳುವುದು ಸೂಕ್ತ.(ಮಾನ್ಯ ಸರ್ವೋಚ್ಛ ನ್ಯಾಯಾಲಯವು ಇಮ್ರಾನ್ ಪ್ರತಾಪ್ಘಡಿ ವಿರುದ್ಧ ಗುಜರಾತ್ ರಾಜ್ಯ ಸರ್ಕಾರ ಪ್ರಕರಣದಲ್ಲಿ ನೀಡಿದ ನಿರ್ದೇಶನಗಳನ್ನು ಗಮನಿಸುವುದು.) ಈ ಕುರಿತಂತೆ ಹಾಜರಿರುವ ದೂರುದಾರ ಅಥವಾ ಪ್ರತಿನಿಧಿಗೆ ಪ್ರಾಥಮಿಕ ವಿಚಾರಣೆ ಕೈಗೊಳ್ಳುವ ಬಗ್ಗೆ ಮತ್ತು ಹೊರಬರುವ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಹಿಂಬರಹ ನೀಡುವುದು ಸೂಕ್ತ.
(3) ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯನ್ನು 14 ದಿನಗಳೊಳಗಾಗಿ ಪೂರ್ಣಗೊಳಿಸಿ ಆ ಮೂಲಕ ದೂರಿನಲ್ಲಿ ಸಂಜ್ಞೆ ಅಪರಾಧಿಕ ಅಂಶಗಳು ಕಂಡುಬಂದ ಅಥವಾ ಕಂಡುಬರದೇ ಇರುವ ಬಗ್ಗೆ ಅಥವಾ ಪ್ರಕರಣವು ತನಿಖೆಗೆ ಅರ್ಹ ಅಥವಾ ಅರ್ಹವಲ್ಲ ಎಂಬ ಬಗ್ಗೆ ಕಂಡುಕೊಂಡು ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದು.
ಒಂದು ವೇಳೆ ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದ ಫಲಿತಾಂಶದ ಅನುಸಾರ ದೂರಿನಲ್ಲಿ ಸಂಜ್ಞೆ ಅಪರಾಧಿಕ ಅಂಶಗಳು ಅಥವಾ ತನಿಖೆಗೆ ಯೋಗ್ಯವಾದ ಪ್ರಕರಣವೆಂದು ಕಂಡುಬಂದಾಗ, ಠಾಣಾ ದಿನಚರಿಯಲ್ಲಿ ನಮೂದಿಸಿ, ದೂರುದಾರನನ್ನು ಠಾಣೆಗೆ ಹಾಜರಿಸಿಕೊಂಡು ಆತನ ದೂರಿನ ಮೇಲೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳುವುದು. ಪ್ರಥಮ ವರ್ತಮಾನ ವರದಿಯನ್ನು, ದೂರಿನ ಮೇಲೆ ಪ್ರಾಥಮಿಕ ವಿಚಾರಣೆ ನಂತರ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಕರಣ ದಾಖಲಿಸಿಕೊಳ್ಳಲು ಉಂಟಾದ ವಿಳಂಬದ ಬಗ್ಗೆ ಉಲ್ಲೇಖಿಸುವುದು.
ಒಂದು ವೇಳೆ ಪ್ರಾಥಮಿಕ ವಿಚಾರಣೆಯನ್ನು ಯಾವುದೇ ಸಂಜ್ಞೆ ಅಪರಾಧಿಕ ಅಂಶಗಳು ಅಥವಾ ತನಿಖೆಗೆ ಯೋಗ್ಯವಾದ ಪ್ರಕರಣವೆಂದು ಕಂಡುಬರದೇ ಹೋದಾಗ, ಠಾಣಾಧಿಕಾರಿಯು ಠಾಣಾ ದಿನಚರಿಯಲ್ಲಿ ನಮೂದಿಸಿ ಮೇಲಾಧಿಕಾರಿಗಳಿಗೆ ತಿಳಿಸಿ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರನ್ನು ಪ್ರಕರಣವನ್ನಾಗಿ ದಾಖಲಿಸಿಕೊಳ್ಳಲು ಅಥವಾ ತನಿಖೆಗೆ ಯೋಗ್ಯವೆಂದು ಕಂಡುಬರದೇ ಇರುವುದರಿಂದ ಸೂಕ್ತ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸಿ ಪರಿಹಾರ ಕಂಡುಕೊಳ್ಳುವುದು ಎಂದು ಹಿಂಬರಹ ನೀಡುವುದು ಸೂಕ್ತ.
3 ) ಆದರೆ, ಸ್ವೀಕರಿಸಿದ ಮಾಹಿತಿ ಅಥವಾ ದೂರಿನಲ್ಲಿ ಅಪರಾಧಿತ್ವದ ಅಂಶಗಳು ಕಂಡುಬಂದು, ಆದರೆ ಸಂಜ್ಞೆ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರದೇ ಇದ್ದಾಗ, ಠಾಣಾಧಿಕಾರಿಯು ಸಂಜ್ಞೆ ಅಪರಾಧಿಕ ಅಂಶಗಳು ಕಂಡುಕೊಳ್ಳುವ ಕುರಿತಂತೆ ಪ್ರಾಥಮಿಕ ವಿಚಾರಣೆಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಲಲಿತಾ ಕುಮಾರಿ ಹಾಗೂ ಇತರರು ವಿರುದ್ಧ ಉತ್ತರ ಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಪ್ರಾಥಮಿಕ ವಿಚಾರಣೆಯನ್ನು ಕೈಗೊಳ್ಳಬಹುದು.
ಒಂದು ವೇಳೆ ಸ್ವೀಕರಿಸಿದ ದೂರಿನಲ್ಲಿ ಆಪಾದಿತ ಅಪರಾಧಿಕ ಕೃತ್ಯವು ಮೂರು ವರ್ಷಗಳಿಗಿಂತ ಮೇಲ್ಪಟ್ಟು, ಆದರೆ ಏಳು ವರ್ಷಗಳಿಗಿಂತ ಕಡಿಮೆ ಅವಧಿಗೆ ಶಿಕ್ಷೆಗೊಳಪಡುವ ಅಪರಾಧವಿರುವುದು ಕಂಡುಬಂದಿದ್ದು, ಆದರೆ ಮೇಲ್ನೋಟಕ್ಕೆ ತನಿಖೆಗೆ ಒಳಪಡಬಹುದಾದ ಪ್ರಕರಣವಲ್ಲವೆಂದು ಕಂಡುಬಂದಾಗ ಠಾಣಾಧಿಕಾರಿಯು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಕಲಂ 173(3) ಅಡಿಯಲ್ಲಿ ಪೊಲೀಸ್ ಉಪ ವಿಭಾಗಾಧಿಕಾರಿಗಳ ಹುದ್ದೆಗೆ ಕಡಿಮೆ ಇಲ್ಲದ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಾಥಮಿಕ ವಿಚಾರಣೆ ಕೈಗೊಳ್ಳುವ ಕುರಿತಂತೆ ಲಿಖಿತ ಅನುಮತಿ ಪಡೆದುಕೊಂಡು, ವಿಚಾರಣೆಯನ್ನು ಕೈಗೊಳ್ಳುವುದು ಸೂಕ್ತ.(ಮಾನ್ಯ ಸರ್ವೋಚ್ಛ ನ್ಯಾಯಾಲಯವು ಇಮ್ರಾನ್ ಪ್ರತಾಪ್ಘಡಿ ವಿರುದ್ಧ ಗುಜರಾತ್ ರಾಜ್ಯ ಸರ್ಕಾರ ಪ್ರಕರಣದಲ್ಲಿ ನೀಡಿದ ನಿರ್ದೇಶನಗಳನ್ನು ಗಮನಿಸುವುದು.) ಈ ಕುರಿತಂತೆ ಹಾಜರಿರುವ ದೂರುದಾರ ಅಥವಾ ಪ್ರತಿನಿಧಿಗೆ ಪ್ರಾಥಮಿಕ ವಿಚಾರಣೆ ಕೈಗೊಳ್ಳುವ ಬಗ್ಗೆ ಮತ್ತು ಹೊರಬರುವ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಹಿಂಬರಹ ನೀಡುವುದು ಸೂಕ್ತ.
(3) ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯನ್ನು 14 ದಿನಗಳೊಳಗಾಗಿ ಪೂರ್ಣಗೊಳಿಸಿ ಆ ಮೂಲಕ ದೂರಿನಲ್ಲಿ ಸಂಜ್ಞೆ ಅಪರಾಧಿಕ ಅಂಶಗಳು ಕಂಡುಬಂದ ಅಥವಾ ಕಂಡುಬರದೇ ಇರುವ ಬಗ್ಗೆ ಅಥವಾ ಪ್ರಕರಣವು ತನಿಖೆಗೆ ಅರ್ಹ ಅಥವಾ ಅರ್ಹವಲ್ಲ ಎಂಬ ಬಗ್ಗೆ ಕಂಡುಕೊಂಡು ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದು.
ಒಂದು ವೇಳೆ ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದ ಫಲಿತಾಂಶದ ಅನುಸಾರ ದೂರಿನಲ್ಲಿ ಸಂಜ್ಞೆ ಅಪರಾಧಿಕ ಅಂಶಗಳು ಅಥವಾ ತನಿಖೆಗೆ ಯೋಗ್ಯವಾದ ಪ್ರಕರಣವೆಂದು ಕಂಡುಬಂದಾಗ, ಠಾಣಾ ದಿನಚರಿಯಲ್ಲಿ ನಮೂದಿಸಿ, ದೂರುದಾರನನ್ನು ಠಾಣೆಗೆ ಹಾಜರಿಸಿಕೊಂಡು ಆತನ ದೂರಿನ ಮೇಲೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳುವುದು. ಪ್ರಥಮ ವರ್ತಮಾನ ವರದಿಯನ್ನು, ದೂರಿನ ಮೇಲೆ ಪ್ರಾಥಮಿಕ ವಿಚಾರಣೆ ನಂತರ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಕರಣ ದಾಖಲಿಸಿಕೊಳ್ಳಲು ಉಂಟಾದ ವಿಳಂಬದ ಬಗ್ಗೆ ಉಲ್ಲೇಖಿಸುವುದು.
ಒಂದು ವೇಳೆ ಪ್ರಾಥಮಿಕ ವಿಚಾರಣೆಯನ್ನು ಯಾವುದೇ ಸಂಜ್ಞೆ ಅಪರಾಧಿಕ ಅಂಶಗಳು ಅಥವಾ ತನಿಖೆಗೆ ಯೋಗ್ಯವಾದ ಪ್ರಕರಣವೆಂದು ಕಂಡುಬರದೇ ಹೋದಾಗ, ಠಾಣಾಧಿಕಾರಿಯು ಠಾಣಾ ದಿನಚರಿಯಲ್ಲಿ ನಮೂದಿಸಿ ಮೇಲಾಧಿಕಾರಿಗಳಿಗೆ ತಿಳಿಸಿ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರನ್ನು ಪ್ರಕರಣವನ್ನಾಗಿ ದಾಖಲಿಸಿಕೊಳ್ಳಲು ಅಥವಾ ತನಿಖೆಗೆ ಯೋಗ್ಯವೆಂದು ಕಂಡುಬರದೇ ಇರುವುದರಿಂದ ಸೂಕ್ತ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸಿ ಪರಿಹಾರ ಕಂಡುಕೊಳ್ಳುವುದು ಎಂದು ಹಿಂಬರಹ ನೀಡುವುದು ಸೂಕ್ತ.





