BIG NEWS: ಹಾರ – ಶಾಲಿನ ಬದಲು ಪುಸ್ತಕ ನೀಡಿ; ಸಚಿವ ಪ್ರಿಯಾಂಕ್ ಖರ್ಗೆ ಮನವಿ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಪ್ರಿಯಾಂಕ್ ಖರ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದಿಸಲು ಗಣ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಮನವಿಯೊಂದನ್ನು ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಾವು ತೋರುತ್ತಿರುವ ಪ್ರೀತಿ, ಅಭಿಮಾನಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲಾ.

ಈಗ ಪ್ರತಿನಿತ್ಯ ಸಾವಿರಾರು ಜನರು ಮನೆಗೇ ಬಂದು ಶುಭ ಹಾರೈಸುತ್ತಿದ್ದೀರಿ. ಈ ಪ್ರಮಾಣದ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಸದಾ ಚಿರಋಣಿ. ನಿಮ್ಮ ಆಶೀರ್ವಾದ ಹಾಗೂ ಹಾರೈಕೆಗಳು ಜನಪರ ಕೆಲಸ ಮಾಡುತ್ತಲೇ ಇರಲು ನಮಗೆ ಸದಾ ಪ್ರೇರಣೆಯಾಗಿರಲಿದೆ.

ನಿಮ್ಮ ಅಭಿಮಾನ ವ್ಯಕ್ತಪಡಿಸುವ ಸಂದರ್ಭದಲ್ಲಿ ತಾವು ಹಾರ, ಪುಷ್ಪಗುಚ್ಛ, ಶಾಲು-ಶಲ್ಯಗಳ ಮೇಲೆ ಅನಗತ್ಯವಾಗಿ ಹಣ ವ್ಯಯಿಸುತ್ತಿರುವಿರಿ. ಇನ್ಮುಂದೆ ನಾನು ಇವ್ಯಾವುದನ್ನೂ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ.

ಬುದ್ಧ-ಬಸವ-ಅಂಬೇಡ್ಕರ್-ಗುರು ನಾರಾಯಣ-ಸಂತ ಸೇವಲಾಲರಂತಹ ಮಹನೀಯರೆಲ್ಲಾ ಜ್ಞಾನಾರ್ಜನೆ ಜೀವನದ ಗುರಿಯಾಗಬೇಕು ಎಂದು ಪ್ರತಿಪಾದಿಸಿದ್ದರು. ನಮೆಲ್ಲರ ಪ್ರಯತ್ನ ಅದರೆಡೆಯೇ ಇರಲಿ. ಹೂಗುಚ್ಚದ ಬದಲಿಗೆ ಪುಸ್ತಕ ನಿಮ್ಮ ಆಯ್ಕೆಯಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read