BIG NEWS: ಸರ್ಜಿಕಲ್ ಸ್ಟ್ರೈಕ್ ಮಾಡಲು ನನ್ನನ್ನು ಕಳುಹಿಸಿದ್ದಾರೆ; ವರುಣಾದಲ್ಲಿ ಗನ್ ಹಿಡಿದು ನಿಂತಿದ್ದೇನೆ ಎಂದ ಸಚಿವ ವಿ. ಸೋಮಣ್ಣ

ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ವಾಗ್ಬಾಣ ಜೋರಾಗಿದೆ. ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿರುವ ಸಚಿವ ವಿ. ಸೋಮಣ್ಣ, ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇನೆ. ವರುಣಾದಲ್ಲಿ ಗನ್ ಹಿಡಿದು ನಿಂತಿದ್ದೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, ವರುಣಾ, ಚಾಮರಾಜನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲು ನನ್ನನ್ನು ಬಿಟ್ಟಿದ್ದಾರೆ. ತಾಯಿ ಚಾಮುಂಡೇಶ್ವರಿ, ಮಲೈಮಾದಪ್ಪ ದಂಡ ನಾಯಕರು ಅವರು ಏನು ದಾರಿ ತೋರಿಸುತ್ತಾರೋ ಅದು ಆಗುತ್ತೆ ಎಂದರು.

ವರುಣಾದಲ್ಲಿ ನಾನು ಗನ್ ಹಿಡಿದುಕೊಂಡಿದ್ದೇನೆ. ಗನ್ ಹೊಡೆಸೋದು ಚಾಮುಂಡಿ ಹಾಗೂ ಮಲೈ ಮಹದೇಶ್ವರ ಎಂದು ಹೇಳಿದರು. ಇನ್ನು ವರುಣಾದಲ್ಲಿ ಬದಲಾವಣೆ ಗಾಳಿ ಬೀಸುವುದು ಗ್ಯಾರಂಟಿ. ಅಲ್ಲಿನ ಜನರು ಆದರದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಮನೆ ಮಗನಂತೆ ಪ್ರೀತಿ ತೋರುತ್ತಿದ್ದಾರೆ ಎಂದು ಹೇಳಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read