ಬೆಂಗಳೂರು : ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿ ಶಿಸ್ತು ಪಾಲನೆ ಕಡ್ಡಾಯಗೊಳಿಸಲಾಗಿದೆ. ಶಾಸ್ತ್ರ/ಭವಿಷ್ಯ ಹೇಳುವುದು, ಸ್ಕೇಟಿಂಗ್, ಫೋಟೋಶೂಟ್ ಸೇರಿದಂತೆ 20ಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿಷೇಧಿಸಲಾಗಿದೆ.
ಯಾವುದೆಲ್ಲ ನಿಷಿದ್ಧ?
ಉದ್ಯಾನದ ಒಳ ರಸ್ತೆಗಳಲ್ಲಿ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋಗಳಿಗೆ ಪ್ರವೇಶವಿಲ್ಲ. ಉದ್ಯಾನದ ಆವರಣದಲ್ಲಿ ಮಾರಾಟ ನಿಷಿದ್ಧ ಹಾಗೂ ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ ಮಾಡುವಂತಿಲ್ಲ. ಪ್ಲಾಸ್ಟಿಕ್ ವಸ್ತುಗಳು, ಯಾವುದೇ ತ್ಯಾಜ್ಯಗಳನ್ನು ಉದ್ಯಾನಕ್ಕೆ ತರವುದು, ಎಲ್ಲೆಂದರಲ್ಲಿ ಎಸೆಯುವುದಕ್ಕೂ ಅವಕಾಶವಿಲ್ಲ. ಪಾರ್ಸೆಲ್ ಊಟ/ತಿಂಡಿ ತರುವುದು ನಿಷಿದ್ಧ. ಮರಗಳನ್ನು ಹತ್ತುವುದು ಅಥವಾ ಅವುಗಳಿಗೆ ಹಾನಿ ಮಾಡುವಂತಿಲ್ಲ. ಬ್ಯಾನರ್ ಹಾಕುವುದು, ಸಭೆ – ಸಮಾರಂಭ ನಡೆಸುವುದು ಸಂಪೂರ್ಣ ನಿಷೇಧ. ಉದ್ಯಾನದಲ್ಲಿ ಪಟಾಕಿ ಹಚ್ಚುವುದು, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆ ನಡೆಸುವುದು ನಿಷೇಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.
ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿ ಶಿಸ್ತು ಪಾಲನೆ ಕಡ್ಡಾಯಗೊಳಿಸಲಾಗಿದೆ. ಶಾಸ್ತ್ರ/ಭವಿಷ್ಯ ಹೇಳುವುದು, ಸ್ಕೇಟಿಂಗ್, ಫೋಟೋಶೂಟ್ ಸೇರಿದಂತೆ 20ಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿಷೇಧಿಸಲಾಗಿದೆ.
— DIPR Karnataka (@KarnatakaVarthe) June 11, 2025
ಯಾವುದೆಲ್ಲ ನಿಷಿದ್ಧ?: ಉದ್ಯಾನದ ಒಳ ರಸ್ತೆಗಳಲ್ಲಿ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋಗಳಿಗೆ… pic.twitter.com/OVKFmlMjdn