ಶಿವಮೊಗ್ಗ: ಮುಸ್ಲಿಂಮರೇ ಇಲ್ಲದ ಊರಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ ಮಾಡಲಾಗಿದೆ. ಬಂಜಾರ ಸಮುದಾಯದಿಂದ ಭಾವೈಕತೆಯ ಮೊಹರಂ ಆಚರಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಮುಸ್ಲಿಂಮರೇ ಇಲ್ಲ. ಈ ಊರಲ್ಲಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸಿರುವುದು ವಿಶೇಷವಾಗಿದೆ. ಒಂದೇ ಒಂದು ಮುಸ್ಲಿಂ ಮನೆ ಇಲ್ಲದಿದ್ದರೂ ಬಂಜಾರ ಸಮುದಾಯದವರು ಅದ್ದೂರಿಯಾಗಿ ಮೊಹರಂ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಶೀರಿಹಳ್ಳಿ ತಾಂಡಾದಲ್ಲಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸಲಾಗಿದೆ. ಮೂರು ದಿನಗಳ ಕಾಲ ಅಲೈದೇವರನ್ನ ಇಟ್ಟು ಪೂಜೆ ಮಾಡುವ ಬಂಜಾರರು ಮೂರನೇ ದಿನದಂದು ಅದ್ದೂರಿಯಾಗಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದ್ದಾರೆ.
ಮೆರವಣಿಗೆ ವೇಳೆ ಬಂಜಾರ ಸಂಪ್ರದಾಯದಂತೆ ಹಾಡು, ಭಜನೆ ಮೂಲಕ ಮೊಹರಂ ಆಚರಿಸುವ ಮೂಲಕ ಭಾವೈಕತೆ ಸಾರಿದ್ದಾರೆ.