ದಾರುಣ ಘಟನೆ : ಮಲಗಿದ್ದಲ್ಲೇ ಮೃತಪಟ್ಟ ಒಂದೇ ಕುಟುಂಬದ ಐವರು ಮಕ್ಕಳು

ಲಕ್ನೋ  : ಒಂದೇ ಕುಟುಂಬದ ಐವರು ಮಕ್ಕಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ದಾರುಣ ಘಟನೆಉತ್ತರ ಪ್ರದೇಶದ  ಅಮ್ರೋಹಾದಲ್ಲಿ ನಡೆದಿದೆ.

ಮನೆಯೊಳಗೆ ಕಲ್ಲಿದ್ದಲು ಬ್ರೇಜಿಯರ್ ಸುಟ್ಟ ಪರಿಣಾಮ ಮನೆಯಲ್ಲಿ ಹೊಗೆ ತುಂಬಿದ್ದು, ಗಾಳಿಯಾಡದ ಪರಿಣಾಮ ಒಂದೇ ಕುಟುಂಬದ ಐವರು ಸದಸ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇಲ್ನೋಟಕ್ಕೆ ಆಮ್ಲಜನಕದ ಕೊರತೆ ಐವರ ಸಾವಿಗೆ ಕಾರಣವಾಗಿರಬಹುದು, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಎಷ್ಟು ಹೊತ್ತಾದರೂ ಕುಟುಂಬವು ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರಿಗೆ ಅನುಮಾನ ಬಂದು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದಾಗ ಐವರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read