KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಖಾತೆ ತೆರೆಯದ `ಪಡಿತರ ಚೀಟಿದಾರ’ರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

Published July 14, 2023 at 12:14 pm
Share
SHARE

ರಾಜ್ಯ ಸರ್ಕಾರದ ಆದೇಶದಂತೆ ಅಂತ್ಯೋದಯ(ನಾಲ್ಕು ಅಥವಾ ನಾಲ್ಕಕ್ಕಿಂತ  ಹೆಚ್ಚು ಸದಸ್ಯರು) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದ್ದು,  ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಬೇಕಾಗಿರುತ್ತದೆ.

 ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರು ನಮೂದಾಗಿರಬೇಕು  ಕುಟುಂಬದ ಮುಖ್ಯಸ್ಥರು  ನಿಧನಹೊಂದಿದ್ದಲ್ಲಿ, ಸಂಬಂಧಪಟ್ಟ  ತಾಲೂಕಿನ  ಆಹಾರ  ಶಾಖೆಗೆ  ಭೇಟಿ  ನೀಡಿ,  ಆಹಾರ  ನಿರೀಕ್ಷಕರಿಗೆ ಈ  ಬಗ್ಗೆ  ಮಾಹಿತಿ  ನೀಡಿ,  ಮೃತರ ಹೆಸರನ್ನು  ಪಡಿತರ  ಚೀಟಿಯಿಂದ  ತೆಗೆದು ಹಾಕಿ, ಇ-ಕೆವೈಸಿ  ಮೂಲಕ  ಕುಟುಂಬದ ಮುಖ್ಯಸ್ಥರನ್ನು  ನಮೂದು  ಮಾಡಿಕೊಳ್ಳಬೇಕು. ಒಂದಕ್ಕಿAತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶವಿರುವುದಿಲ್ಲ.

ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿದ್ದು, ಪಡಿತರ ಚೀಟಿದಾರರು ಮಾಹಿತಿಯನ್ನು ಪಡೆದು ಕೂಡಲೇ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ/ಚಾಲ್ತಿಗೊಳಿಸುವ ಬಗ್ಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಜುಲೈ 2023 ಮಾಹೆಯಲ್ಲಿ ನಗದು ವರ್ಗಾವಣೆ ಆಗುವುದಿಲ್ಲ.

 ಈ ಫಲಾನುಭವಿಗಳು 2023 ರ ಜುಲೈ 20 ರ ಒಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಗೊಳಿಸಿದಲ್ಲಿ ಅಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಪಡಿತರ  ಚೀಟಿದಾರರು  ನೇರ  ನಗದು ವರ್ಗಾವಣೆ ಪ್ರಯೋಜನ ಪಡೆಯಲು  ಪ್ರತ್ಯೇಕವಾಗಿ ಅರ್ಜಿ  ಸಲ್ಲಿಸುವ  ಅವಶ್ಯಕತೆ  ಇರುವುದಿಲ್ಲ. ಪಡಿತರ ಚೀಟಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಬ್ಯಾಂಕ್ ಖಾತೆ ತೆರೆಯುವ ಸಂಬAಧ  ಕ್ರಮವಹಿಸಲಿದ್ದು, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಶಿಬಿರವನ್ನು ನಡೆಸಿ ಸದ್ರಿ ಫಲಾನುಭವಿಗಳಿಗೆ ಆ ಕೂಡಲೇ ಬ್ಯಾಂಕ್ ಅಕೌಂಟ್ ತೆರೆದು ನೀಡುವರು. ಈ ಸಂಬAಧ ಸದ್ರಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಓಟಿಪಿ ಸ್ವೀಕರಿಸಬೇಕಾದ ಮೊಬೈಲ್, ಆಧಾರ್ ಕಾರ್ಡ್ ಪ್ರತಿ, ತರಬೇಕು.

 ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್  ವತಿಯಿಂದ ಈ ಕೆಳಕಂಡ ತಾಲೂಕುಗಳಲ್ಲಿ ನಿಗಧಿತ ದಿನಾಂಕಗಳAದು ಶಿಬಿರ ಆಯೋಜಿಸಲಾಗುವುದು.

 ಉಡುಪಿ ತಾಲೂಕಿನಲ್ಲಿ ಜುಲೈ 14 ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಕಚೇರಿ, ಜು. 18 ರಂದು ಉದ್ಯಾವರ ಗ್ರಾಮ ಪಂಚಾಯತ್ ಕಚೇರಿ, ಜು. 19 ರಂದು ಉಡುಪಿ ತಾಲೂಕು ಕಚೇರಿಯ ಆಹಾರ ಶಾಖೆ, ಜು. 20 ರಂದು ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿ ಹಾಗೂ ಮಲ್ಪೆ ಅಂಚೆ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

ಕಾಪು ತಾಲೂಕಿಗೆ ಸಂಬAಧಿಸಿದAತೆ ಜು. 15 ರಂದು ಕಾಪು ಅಂಚೆ ಕಚೇರಿ, ಜು. 17 ರಂದು ಕಟಪಾಡಿ ಗ್ರಾಮ ಪಂಚಾಯತ್, ಜು. 20 ರಂದು ಶಿರ್ವ ಅಂಚೆ ಕಚೇರಿ ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

 ಬ್ರಹ್ಮಾವರ ತಾಲೂಕಿನಲ್ಲಿ ಜು. 14 ರಂದು ಮಂದಾರ್ತಿ ಅಂಚೆ ಕಚೇರಿ, ಜು. 17 ರಂದು ಬ್ರಹ್ಮಾವರ ಅಂಚೆ ಕಚೇರಿ ಹಾಗೂ ಜು. 18 ರಂದು ಕೋಟಾ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಕುಂದಾಪುರ ತಾಲೂಕಿನಲ್ಲಿ ಜು. 15 ರಂದು ಸಿದ್ಧಾಪುರ ಗ್ರಾಮ ಪಂಚಾಯತ್, ಜು. 19 ರಂದು ಹಾಲಾಡಿ ಗ್ರಾಮ ಪಂಚಾಯತ್ ಕಚೇರಿ ಹಾಗೂ ಜು. 20 ರಂದು ವಂಡ್ಸೆ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಬೈಂದೂರು ತಾಲೂಕಿನಲ್ಲಿ ಜು. 15 ರಂದು ಹಳ್ಳಿಹೊಳೆ ಗ್ರಾಮ ಪಂಚಾಯತ್, ಜು. 17 ರಂದು ಬೈಂದೂರು ತಾಲೂಕು ಕಚೇರಿ ಆಹಾರ ಶಾಖೆ, ಜು. 20 ರಂದು ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿ ಹಾಗೂ ಮರವಂತೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಏರ್ಪಡಿಸಲಾಗುವುದು.

ಕಾರ್ಕಳ ತಾಲೂಕಿನಲ್ಲಿ ಜು. 17 ರಂದು ಕಾರ್ಕಳ ತಾಲೂಕು ಕಚೇರಿ, ನಲ್ಲೂರು ಗ್ರಾಮ ಪಂಚಾಯತ್ ಹಾಗೂ ಬೆಳ್ಮಣ್ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಜು. 18 ರಂದು ಅಜೆಕಾರು ನಾಡ ಕಚೇರಿ, ಮಾಳ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಈದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಹೆಬ್ರಿ ತಾಲೂಕಿನಲ್ಲಿ ಜು. 15 ರಂದು ಹೆಬ್ರಿ ತಾಲೂಕು ಕಚೇರಿ, ಬೆಳ್ವೆ ಅಂಚೆ ಕಚೇರಿ ಹಾಗೂ ಮುದ್ರಾಡಿ ಅಂಚೆ ಕಚೇರಿಗಳಲ್ಲಿ ಶಿಬಿರ ಏರ್ಪಡಿಸಲಾಗುವುದು.   ಸಾರ್ವಜನಿಕರು   ಪಡಿತರ  ಹಣ   ವರ್ಗಾವಣೆ  ಬಗ್ಗೆ ವೆಬ್ ಸೈಟ್  ಮೂಲಕ  ನೇರ  ನಗದು  ಪಾವತಿಯಾದ  ಕುರಿತು  ಪರಿಶೀಲಿಸಬಹುದಾಗಿದೆ.   ಹೆಚ್ಚಿನ  ಮಾಹಿತಿಗಾಗಿ  ಸಂಬಂಧಪಟ್ಟ  ತಾಲೂಕು ಆಹಾರ  ಶಾಖೆಯನ್ನು ಸಂಪರ್ಕಿಸುವAತೆ ಹಾಗೂ ಸಾರ್ವಜನಿಕರು ಈ ಯೋಜನೆಯ  ಪ್ರಯೋಜನ  ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You Might Also Like

BREAKING: ಧರ್ಮಸ್ಥಳ ಪ್ರಕರಣ: SIT ಅಧಿಕಾರಿಗಳಿಂದ 8ನೇ ಪಾಯಿಂಟ್ ನಲ್ಲಿ ಶೋಧಕಾರ್ಯ ಚುರುಕು

BREAKING: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 7ನೇ ಪಾಯಿಂಟ್ ನಲ್ಲಿ ಕರವಸ್ತ್ರ ಪತ್ತೆ

BIG NEWS: ಭಾರಿ ಮಳೆ: ಅಮರನಾಥ ಯಾತ್ರೆ ಮೂರು ದಿನಗಳಕಾಲ ಸ್ಥಗಿತ

ಮಾಜಿ ಸೈನಿಕರ ಮಕ್ಕಳಿಗೆ 2025-26 ನೇ ಶೈಕ್ಷಣಿಕ ಸಾಲಿನ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

SHOCKING : ‘ಬೈಕ್’ಗೆ ಬೃಹತ್ ಹೆಬ್ಬಾವನ್ನು ಕಟ್ಟಿ ಕ್ರೂರವಾಗಿ ಎಳೆದೊಯ್ದ ಕಿಡಿಗೇಡಿ : ಆಘಾತಕಾರಿ ವೀಡಿಯೋ ವೈರಲ್ |WATCH VIDEO

TAGGED:Ration cardರೇಷನ್ ಕಾರ್ಡ್bank accountಬ್ಯಾಂಕ್ ಖಾತೆಅನ್ನಭಾಗ್ಯAnnabhagyaಶಿಬಿರ ಆಯೋಜನೆcamp organized
Share This Article
Facebook Copy Link Print

Latest News

BREAKING: ಧರ್ಮಸ್ಥಳ ಪ್ರಕರಣ: SIT ಅಧಿಕಾರಿಗಳಿಂದ 8ನೇ ಪಾಯಿಂಟ್ ನಲ್ಲಿ ಶೋಧಕಾರ್ಯ ಚುರುಕು
BREAKING: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 7ನೇ ಪಾಯಿಂಟ್ ನಲ್ಲಿ ಕರವಸ್ತ್ರ ಪತ್ತೆ
BIG NEWS: ಭಾರಿ ಮಳೆ: ಅಮರನಾಥ ಯಾತ್ರೆ ಮೂರು ದಿನಗಳಕಾಲ ಸ್ಥಗಿತ
ಮಾಜಿ ಸೈನಿಕರ ಮಕ್ಕಳಿಗೆ 2025-26 ನೇ ಶೈಕ್ಷಣಿಕ ಸಾಲಿನ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಬೆಂಗಳೂರು ಟ್ರಾಫಿಕ್‌ಗೆ ಪರಿಹಾರ ಇದೆಯೇ ? ಖಾಕಿ ಪಡೆಗೆ ನಿಖಿಲ್ ಕಾಮತ್ ಪ್ರಶ್ನೆ !
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch
ಬೆಂಗಳೂರಿಗೆ ಬಂಪರ್ ಕೊಡುಗೆ : 40 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣಕ್ಕೆ BMRCL ʼಗ್ರೀನ್ ಸಿಗ್ನಲ್ʼ

Entertainment

BREAKING : ಖ್ಯಾತ ಮಲಯಾಳಂ ನಟ ವಿಷ್ಣು ಪ್ರಸಾದ್ ವಿಧಿವಶ |actor Vishnu Prasad passes away
BREAKING : ಮಲಯಾಳಂ ನಟ ‘ಶೈನ್ ಟಾಮ್ ಚಾಕೋ’ ಕಾರು ಅಪಘಾತ : ತಂದೆ ಸಾವು, ತಾಯಿಗೆ ಗಂಭೀರ ಗಾಯ.!
ಮುಂಬೈಗಿಂತ ಕಡಿಮೆ ಬಾಡಿಗೆಗೆ ಸಿಗುತ್ತೆ ಐಷಾರಾಮಿ ವಿಲ್ಲಾ ; ನಟಿ ಹಂಚಿಕೊಂಡ ವಿಡಿಯೋ ವೈರಲ್‌ | Watch

Sports

BREAKING : ವಾಂಖೆಡೆ ಕ್ರೀಡಾಂಗಣದಿಂದ 6.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ‘IPL’ ಜೆರ್ಸಿ ಕಳುವು : ‘FIR’ ದಾಖಲು.!
ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ
ಅಜಯ್ ದೇವಗನ್ – ಶಾಹಿದ್ ಅಫ್ರಿದಿ ವೈರಲ್ ಫೋಟೋದ ಅಸಲಿಯತ್ತೇನು ? ಭಾರತ-ಪಾಕ್ ಪಂದ್ಯ ರದ್ದಾದ ಬೆನ್ನಲ್ಲೇ ಸ್ಪಷ್ಟನೆ !

Special

ಅಜ್ಜ-ಅಜ್ಜಿಯ ಮಡಿಲು: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರೀರಕ್ಷೆ….!
ʼಈರುಳ್ಳಿ ಸಿಪ್ಪೆ’ ಎಸೆಯುವ ಮುನ್ನ ತಿಳಿದುಕೊಳ್ಳಿ ಈ ವಿಷಯ
ಧಾವಂತದ ಬದುಕಿನಿಂದ ಪಡೆಯಿರಿ ಮುಕ್ತಿ; ರಿಫ್ರೇಶ್‌ ಗಾಗಿ ಪಡೆಯಿರಿ ಸ್ವಲ್ಪ ವಿರಾಮ….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?