alex Certify ‘ಮತದಾನ’ ಮಾಡಲು ವಿದೇಶದಿಂದ ಬಂದ ಮಲೆನಾಡಿನ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮತದಾನ’ ಮಾಡಲು ವಿದೇಶದಿಂದ ಬಂದ ಮಲೆನಾಡಿನ ಯುವಕ….!

ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಈಗಾಗಲೇ ಇದು ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಕ್ಯೂ ಹಚ್ಚಿ ನಿಂತಿದ್ದಾರೆ.

ಮತದಾನದ ಪ್ರಮಾಣ ಹೆಚ್ಚಿಸಲು ಪ್ರತಿ ಬಾರಿಯೂ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ನಡುವೆಯೂ ಬಹಳಷ್ಟು ಮಂದಿ ಮತದಾನದ ಮಹತ್ವ ಅರಿಯದೆ ನಿರ್ಲಕ್ಷ್ಯ ವಹಿಸುತ್ತಾರೆ. ಇಂಥವರ ಮಧ್ಯೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲೆನಾಡಿನ ಯುವಕನೊಬ್ಬ ಮತದಾನ ಮಾಡುವ ಸಲುವಾಗಿಯೇ ರಜೆ ಪಡೆದುಕೊಂಡು ಸ್ವದೇಶಕ್ಕೆ ಬಂದಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕಾಗಿನೆರೆ ಗ್ರಾಮದ ಕಾಫಿ ಬೆಳೆಗಾರರಾದ ಪರಮೇಶ್ – ಸುಧಾ ದಂಪತಿಯ ಪುತ್ರ ಸ್ಪಂದನ್ ಗೌಡ ಲಂಡನ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಮತದಾನಕ್ಕಾಗಿ ಕಾಲೇಜು ಮುಖ್ಯಸ್ಥರ ಅನುಮತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...