BIG NEWS: ನರಿ ಕೂಗು ಗಿರಿ ಮುಟ್ಟಲ್ಲ: ಬಿಜೆಪಿ ರೆಬಲ್ ನಾಯಕರ ದೆಹಲಿ ಪ್ರವಾಸಕ್ಕೆ ಛಲವಾದಿ ನಾರಾಯಣಸ್ವಾಮಿ ಟಾಂಗ್

ಕೋಲಾರ: ತಮ್ಮದೇ ಪಕ್ಷದ ರೆಬಲ್ ನಾಯಕರು ದೆಹಲಿ ಪ್ರವಾಸ ಕೈಗೊಂಡಿದ್ದು, ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ನರಿ ಕೂಗು ಗಿರಿ ಮುಟ್ಟಲ್ಲ ಎಂಬ ಮಾತಿದೆ. ಹಾಗೇ ರೆಬಲ್ ನಾಯಕರು ದೆಹಲಿಗೆ ಹೋಗಿ ಏನು ಮಾಡುತ್ತಾರೆ? ಏನೋ ಕೆಲಸಕ್ಕೆ ಹೋಗಿರಬೇಕಷ್ಟೇ ಹೋಗಲಿ ಬಿಡಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದರು ಕೆಳಗೆ ಇಳಿಬಹುದು ಎಂದಿದ್ದಾರೆ.

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅವರು ಏನು ಮಾಡ್ತಾರೆ? ಅವರು ಹತ್ತೋಕೆ ಆಗುತ್ತಾ? ಆಗಲ್ಲ. ಯಾರಿಗೆ ಹೆಚ್ಚು ಜನ ಬೆಂಬಲವಿದೆಯೋ ಅವರಿಗೆ ಹೈಕಮಾಂಡ್ ನಾಯಕರು ಅಧಿಅಕರ ಕೊಡ್ತಾರೆ. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read