ಬೆಂಗಳೂರು : ನಟ ದರ್ಶನ್ ಸೆಲ್ ಸುತ್ತಾಮುತ್ತಾ ಇದ್ದ ನಟೋರಿಯಸ್ ರೌಡಿಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಟ ದರ್ಶನ್ ಸೆಲ್ ಸುತ್ತಾಮುತ್ತಾ ಇದ್ದ ಆರೋಪಿಗಳನ್ನು ಪೊಲೀಸರು ಬೇರೆ ಸೆಲ್ ಗೆ ಶಿಫ್ಟ್ ಮಾಡಿದ್ದಾರೆ. ಕಳೆದ ಬಾರಿ ನಡೆದ ಅವಾಂತರದಿಂದ ಅಲರ್ಟ್ ಆದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ನಟ ದರ್ಶನ್ ಇಡಲಾಗಿದ್ದ ಸೆಲ್ ಗೆ ಬಂದೋಬಸ್ತ್ ಮಾಡಲಾಗಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ ನಟ ದರ್ಶನ್ ಸೆಲ್ ಸುತ್ತಾಮುತ್ತಾ ಇದ್ದ ನಟೋರಿಯಸ್ ರೌಡಿಗಳನ್ನು ಶಿಫ್ಟ್ ಮಾಡಲಾಗಿದೆ. ದರ್ಶನ್ ಸೆಲ್ ಗೆ ಹೊಂದಿಕೊಂಡಿರುವ ಸೆಲ್ ಗಳ ಮೇಲೆ ಪೊಲಿಸರು ನಿಗಾ ವಹಿಸಿದ್ದಾರೆ.
ಈ ಹಿಂದೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಹರಟುತ್ತಾ ಕುಳಿತ ನಟ ದರ್ಶನ್ ಫೋಟೋ ವೈರಲ್ ಆಗಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರು ನಿಗಾ ವಹಿಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ಜೊತೆ ನಟ ದರ್ಶನ್ ಕುಳಿತು ಧಮ್ ಹೊಡೆದ, ಲ್ಯಾನ್ ನಲ್ಲಿ ಕುಳಿತು ಕಾಫಿ ಕುಡಿದ ಫೋಟೋಗಳು ವೈರಲ್ ಆಗಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಜೈಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.