ಶುಕ್ರವಾರ ಬೆಳಿಗ್ಗೆ ಅಹಮದಾಬಾದ್ನಲ್ಲಿ ನಡೆಯುತ್ತಿದ್ದ 148ನೇ ಭಗವಾನ್ ಜಗನ್ನಾಥಜಿಯವರ ಮಹಾ ರಥಯಾತ್ರೆಯಲ್ಲಿ ಅಹಿತಕರ ಘಟನೆ ನಡೆದಿದೆ.
ಮೆರವಣಿಗೆಯ ಭಾಗವಾಗಿದ್ದ ಮೂರು ಆನೆಗಳು ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿಹೋದವು. ಈ ವೇಳೆ ಆನೆಯೊಂದು ಭಕ್ತರನ್ನಅಟ್ಟಾಡಿಸಿದೆ. ರಥಯಾತ್ರೆಯ ಮಾರ್ಗದಲ್ಲಿ ಆನೆಗಳು ದಿಕ್ಕು ತಪ್ಪಿದಾಗ ಜನರು ಕೂಡ ಭಯದಿಂದ ದಿಕ್ಕಾಪಾಲಾಗಿ ಓಡಿದರು. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪವಿತ್ರ ಪಹಿಂದ್ ಸಮಾರಂಭವನ್ನು ನೆರವೇರಿಸಿದ ನಂತರ ಯಾತ್ರೆಗೆ ಚಾಲನೆ ನೀಡಿದ್ದರು, ಮೊದಲ ಬಾರಿಗೆ ಭಗವಂತನಿಗೆ ಗೌರವ ಸಲ್ಲಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಕುಟುಂಬದೊಂದಿಗೆ ಜಮಾಲ್ಪುರ್ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾ ಆರತಿಯಲ್ಲಿ ಭಾಗವಹಿಸಿ, ಆ ದಿನಕ್ಕೆ ಭಕ್ತಿಯ ಮೆರುಗು ನೀಡಿದರು.
An elephant went out of control during Lord Jagannath's Rath Yatra in Ahmedabad, there was a stampede.
— Siddharth (@Siddharth_00001) June 27, 2025
The uncontrollable elephant was leading a group of 18 elephants in the Rath Yatra. It was controlled by the forest department staff.
Jagannath Mahaprabhu sabhi ki raksha kare… pic.twitter.com/F1L1jA5ium