ಶ್ರೀನಗರ: ಪ್ರಸಿದ್ಧ ಯಾತ್ರಾ ಸ್ಥಳ ಅಮರನಾಥ ಯಾತ್ರೆಗೆ ಜಮ್ಮು-ಕಾಶ್ಮೀರ ಸರ್ಕಾರ ಬಿಗಿ ಭದ್ರತೆಗಳನ್ನು ಕಲ್ಪಿಸಿದೆ. ಇದೇ ವೇಳೆ ಅಮರನಾಥ ಯಾತ್ರಾ ಮಾರ್ಗಗಳು ಹಾರಾಟ ನಿಷೇಧ ವಲಯ ( No Flying Zone) ಎಂದು ಘೋಷಣೆ ಮಾಡಿದೆ.
ಅಮರನಾಥ ಯಾತ್ರೆಗೆ ತೆರಳು ಎರಡು ಮಾರ್ಗಗಳಿವೆ ಒಂದು ಪಹಲ್ಗಾಮ್ ಮಾರ್ಗ ಹಾಅಗೂ ಮತ್ತೊಂದು ಕಡಿಮೆ ಅಂತರದ ಬಾಲ್ಟಾಲ್ ಮಾರ್ಗ. ಇದೀಗ ಈ ಎರಡೂ ಮಾರ್ಗಗಳನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆದೇಶದ ಮೇರೆಗೆ ಜಮ್ಮು-ಕಾಶ್ಮೀರ ಗೃಹ ಇಲಾಖೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಯುಎವಿಗಳು ಮಾನವರಹಿತ ವೈಮಾನಿಕ ವಾಹನ, ಡ್ರೋನ್ ಗಳು, ಬಲೂನ್ ಗಳು ಸೇರಿದಂತೆ ಯಾವುದೇ ರೀತಿಯ ವಾಯುಯಾನ ಸಾಧನಗಳನ್ನು ಈ ಮಾರ್ಗಗಳಲ್ಲಿ ಹಾರಿಸುವುದನ್ನು ನಿಷೇಧಿಸಲಾಗಿದೆ. ಜುಲೈ 1ರಿಂದ ಆಗಸ್ಟ್ 10ರವರೆಗೆ ಈ ನಿಷೇಧ ಇರಲಿದೆ ಎಂದು ತಿಳಿಸಿದೆ.
ವೈದ್ಯಕೀಯ ಸ್ಥಳಾಂತರಿಸುವಿಕೆ, ವಿಪತ್ತು ನಿರ್ವಹಣೆ ಮತ್ತು ಭದ್ರತಾ ಕಣ್ಗಾವಲು ಕಾರ್ಯಗಳಲ್ಲಿ ಈ ನಿರ್ಬಂದಗಳು ಅನ್ವಯವಾಗುವುದುಲ್ಲ. ಜುಲೈ 3ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆ ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ವಿವಿಧ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.