BIG NEWS: ಸಂಬಂಧಿಯನ್ನು ಕೊಂದು ಚರಂಡಿಗೆ ಎಸೆದು ಹೋಗಿದ್ದ ಹಂತಕ ಅರೆಸ್ಟ್!

ಬೆಂಗಳೂರು: ಸಂಬಂಧಿಯನ್ನೇ ಕೊಂದು ಮೃತದೇಹವನ್ನು ಚರಂಡಿಗೆ ಎಸೆದು ಹೋಗಿದ್ದ ಆರೋಪಿಯನ್ನು ಬೆಂಗಳೂರಿನ ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೀಪಕ್ ಬಹದ್ದೂರ್ ಕೊಲೆಯಾದ ವ್ಯಕ್ತಿ. ನೇಪಾಳ ಮೂಲದ ದೀಪಕ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ವಿಕಾಸ್ ಬಹದ್ದೂರ್ ಅಲಿಯಾಸ್ ಇಂದ್ರ ಬಿಸ್ಪಾ (25) ಕೊಲೆಗಾರ.

ವರ್ತೂರು ಠಾಣೆ ವ್ಯಾಪ್ತಿಯ ಚಿಕ್ಕಬೆಳ್ಳಂದೂರು ಗ್ರಾಮದ ಚರಂಡಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೇ ವೇಳೆ ದೀಪಕ್ ಪತ್ನಿ ಸುಷ್ಮಾ ತನ್ನ ಪತಿ ಕಾಣೆಯಾಗಿದ್ದಾಗಿ ದೂರು ನೀಡಿದ್ದರು. ಈ ವೇಳೆ ಮೃತದೇಹ ಪರಿಶೀಲಿಸಿದ ಸುಷ್ಮಾ, ಇದು ತನ್ನ ಪತಿ ದೀಪಕ್ ಮೃತದೇಹ ಎಂದು ಗುರುತಿಸಿದ್ದರು. ಸಂಬಂಧಿಯೇ ಕೊಲೆ ಮಾಡಿರುವ ಅನುಮಾನವಿದೆ ಎಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಿಕಾಸ್ ಬಹದ್ದೂರ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದೀಪಕ್ ಹಾಗೂ ಸುಷ್ಮಾ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಈ ವಿಚಾರವನ್ನು ಸುಷ್ಮಾ ವಿಕಾಸ್ ಗೆ ಹೇಳಿದ್ದಳಂತೆ. ಸಂಬಂಧಿಯಾಗಿದ್ದರಿಂದ ದೀಪಕ್ ಮನೆಗೆ ಬಂದು ದಂಪತಿಗೆ ವಿಕಾಸ್ ಬುದ್ಧಿವಾದ ಹೇಳಿದ್ದನಂತೆ. ಬುದ್ಧಿ ಹೇಳಿದರೂ ದೀಪಕ್ ಮತ್ತೆ ಮತ್ತೆ ಪತ್ನಿ ಜೊತೆ ಜಗಳವಾಡುತ್ತಿದ್ದನಂತೆ ಒಂದು ದಿನ ದೀಪಕ್ ನನ್ನು ಕರೆದೊಯ್ದ ವಿಕಾಸ್ ಹೊಡೆದು ಬುದ್ಧಿ ಹೇಳಿದ್ದನಂತೆ. ಈ ವೇಳೆ ಹಲ್ಲೆಗೊಳಗಾದ ದೀಪಕ್ ಸಾವನ್ನಪ್ಪಿದ್ದಾನೆ. ಹಾಗಾಗಿ ಮೃತದೇಹವನ್ನು ಚರಂಡಿಗೆ ಎಸೆದು ಎಸ್ಕೇಪ್ ಆಗಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಸದ್ಯ ಆರೋಪಿ ವಿಕಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read