ಕಾರವಾರ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಮಂಕಾಳ ವೈದ್ಯ ಅವರ ವಿರುದ್ಧ ಅವಮಾನಕರ ಮತ್ತು ಸುಳ್ಳಿನಿಂದ ಕೂಡಿದ ಸಂದೇಶ ಹರಿಬಿಟ್ಟಿದ್ದ ಬೈಲೂರು ದೊಡ್ಡಬಲಸೆ ನಿವಾಸಿ ನಾಗರಾಜ ಮಾದೇವ ನಾಯ್ಕ(35), ಬೈಲೂರು ಸಣ್ಣಬಲಸೆಯ ಭಾಸ್ಕರ ನಾರಾಯಣ ದೇವಾಡಿಗ(30) ಅವರನ್ನು ಮುರ್ಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತಾಗಿ ಭಟ್ಕಳದ ತೆರ್ನಮಕ್ಕಿಯ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ನಾಗಪ್ಪ ಸುಬ್ರಾಯ ನಾಯ್ಕ ದೂರು ನೀಡಿದ್ದರು. ಅವರು ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.