alex Certify ಸಿ.ಪಿ. ಯೋಗೇಶ್ವರ್ ಗೆ ಬಿಗ್ ಶಾಕ್: ಚುನಾವಣಾಧಿಕಾರಿಗಳ ದಿಢೀರ್ ದಾಳಿ: 500 ಜನರಿಗೆ ರೆಡಿಯಾಗಿದ್ದ ಬಾಡೂಟ ಸೀಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿ.ಪಿ. ಯೋಗೇಶ್ವರ್ ಗೆ ಬಿಗ್ ಶಾಕ್: ಚುನಾವಣಾಧಿಕಾರಿಗಳ ದಿಢೀರ್ ದಾಳಿ: 500 ಜನರಿಗೆ ರೆಡಿಯಾಗಿದ್ದ ಬಾಡೂಟ ಸೀಜ್

ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಟಿಕೆಟ್ ಗಾಗಿ ಕಸರತ್ತು ಆರಂಭಿಸಿದ್ದು, ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಟಿಕೆಟ್ ವಿಚಾರವಾಗಿ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಸಭೆ ನಡೆಸಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರಿಗಾಗಿ ಮಧ್ಯಾಹ್ನ ಶಿಶಿರ ಹೋಂ ಸ್ಟೇನಲ್ಲಿ ಭರ್ಜರಿ ಬಾಡೂಟ ಏರ್ಪಾಡು ಮಾಡಿದ್ದರು. ಇನ್ನೇನು ಊಟಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎನ್ನುವಾಗಲೇ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಪಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಬಿನೋಯ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 500ಕ್ಕೂ ಹೆಚ್ಚು ಜನರಿಗೆ ಸಿದ್ಧವಾಗಿದ್ದ ಬಾಡೂಟವನ್ನು ಸೀಜ್ ಮಾಡಿದ್ದಾರೆ. ಈ ಮೂಲಕ ಚುನಾವಣಾಧಿಕಾರಿಗಳು ಯೋಗೇಶ್ವರ್ ಗೆ ಶಾಕ್ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...